01/11/2020
ಬಿದ್ದಾಗ ಏಳಬೇಕೆಂಬ ಛಲ,
ಸೋಲುವಾಗ ಗೆಲ್ಲಬೇಕೆಂಬ ಛಲ,
ಸಾಯುವಾಗ ಬದುಕಬೇಕೆಂಬ ಛಲ,
ಇವೆಲ್ಲವನ್ನೂ ತಾಯಿ ನೀಡಬಲ್ಲಳು, ಇಲ್ಲ ತಾಯಿ ಭಾಷೆ ನೀಡಬಲ್ಲದು.
೨೬ ಅಕ್ಷರಗಳು ನಮಗೆ ಮೋಡಿ ಮಾಡಿ, ೫೦ ಅಕ್ಷರಗಳ ಗಟ್ಟಿತನ ಮರೆಸಿಬಿಟ್ಟಿದೆ.
ಬದುಕುತ್ತಿರುವ ನೆಲದ ಭಾಷೆಯನ್ನು ಬಿಟ್ಟು ಅನ್ಯ ಭಾಷೆಯನ್ನು ನಾವು 'ಸಹ್ಯ' ಮಾಡಿಕೊಂಡಿದ್ದೇವೆ, ನಮ್ಮ ಭಾಷೆಗೆ ನಾವು 'ಅಸಹ್ಯ'ವಾಗಿದ್ದೇವೆ.
ಅನ್ನ ನೀಡುವ ನೆಲದ ಭಾಷೆಯೂ ಕೂಡ ಅನ್ನವನ್ನೇ ನೀಡುತ್ತದೆ. ಭಾಷೆಯ ಒಳಹೊಕ್ಕು ಬಾಹ್ಯವನ್ನು ಬೆಳೆಸುವ ಬಾಹುಗಳು ನಮದಾಗಬೇಕು ಅಷ್ಟೇ.!
ನಮ್ಮ ಮುನ್ನುಡಿ, ಬೆನ್ನುಡಿ, ಚೆನ್ನುಡಿ, ಕನ್ನಡಿ, ಹೊನ್ನುಡಿ, ಮಣ್ನುಡಿ ಅನ್ನದನುಡಿ, ಜೇನ್ನುಡಿ, ಎಲ್ಲವೂ ಕನ್ನಡವಾಗಬೇಕು, ಅಂದಾಗ ಮಾತ್ರ ಕನ್ನಡ ಬಾನಾಡಿಯಾಗಿ ಹಾರಾಡುವುದು.
೬೫ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.