Pratilipi Kannada - ಪ್ರತಿಲಿಪಿ ಕನ್ನಡ

Pratilipi Kannada - ಪ್ರತಿಲಿಪಿ ಕನ್ನಡ Discover, read and share your favorite stories, poems and books in a language, device and format of your choice.
(871)

     ಯಾರು ಬೇಕಿತ್ತು ನಿಮಗೆ? ಬಾಗಿಲು ತೆರೆದ ಹರಯದ ಹುಡುಗಿ ಕೇಳಿದಳು. ರವಿತೇಜನ ನೋಟ ಅವಳ ಮೇಲೆ ನಿಂತಿತು. ಕೃಷ್ಣವರ್ಣ ದುಂಬಿ ಕಣ್ಣುಗಳು ಎಡಭಾಗ...
09/07/2026


ಯಾರು ಬೇಕಿತ್ತು ನಿಮಗೆ? ಬಾಗಿಲು ತೆರೆದ ಹರಯದ ಹುಡುಗಿ ಕೇಳಿದಳು. ರವಿತೇಜನ ನೋಟ ಅವಳ ಮೇಲೆ ನಿಂತಿತು. ಕೃಷ್ಣವರ್ಣ ದುಂಬಿ ಕಣ್ಣುಗಳು ಎಡಭಾಗದ ಕೆಳ ತುಟಿಯ ಕೆಳಗಿರುವ ಸಣ್ಣ ಕಪ್ಪು ಮಚ್ಚೆ ಒಂಥರಾ ಅವನನ್ನು ಸೆಳೆಯಿತು. ರಾಜ್ಯಮಟ್ಟದ ವರ್ಷದ ಚಿತ್ರಕಲಾ ರತ್ನ ಪ್ರಶಸ್ತಿ ವಿಜೇತ ರವಿತೇಜನಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಗೌರವ ಉಪನ್ಯಾಸಕನಾಗಿ ಕೆಲಸ ಸಿಕ್ಕಿತ್ತು. ಸಾಹುಕಾರ ರಾಮಚಂದ್ರರವರ ಸಹಾಯದಿಂದ ಕೈಗಾರಿಕೋದ್ಯಮಿ ಜಗನ್ನಾಥ್ ಅವರ ಬೃಹತ್ ಬಂಗಲೆಯ ಔಟ್ ಹೌಸ್‌ನಲ್ಲಿ ವಾಸಿಸಲು ಬಂದಿದ್ದ. ಜಗನ್ನಾಥ್ ಸರ್ ಇದ್ದಾರಾ? ರವಿತೇಜ ಮೆಲ್ಲಗೆ ಕೇಳಿದ. ಹೋ ರಾಮಚಂದ್ರ ಅಂಕಲ್ ಕಳಿಸಿದ ರವಿತೇಜ ನೀವೇನಾ? ಬನ್ನಿ ಒಳಗೆ. ಅವಳು ಬಾಗಿಲನ್ನು ವಿಶಾಲವಾಗಿ ತೆರೆದಳು. ಕೂತ್ಕೊಳ್ಳಿ. ಅಪ್ಪಾಜಿ ಹೊರಗಡೆ ಹೋಗಿದ್ದಾರೆ. ನಿಮಗೆ ಕುಡಿಯಲು ನೀರು ಬೇಕಾ? ಅವಳ ಸರಳತೆ ನೇರ ಮಾತು ರವಿತೇಜನಿಗೆ ಅಚ್ಚರಿ. ನೀರು ಕೊಡಿ ಮೇಡಂ. ಏನು.... ಮೇಡಂ ಅಂತ ಕರೆದ್ರಾ...? ನನ್ ಹೆಸರು ಜಾಹ್ನವಿ ಅಂತ. ಎಲ್ರು ಜಾನು ಜಾನು ಅಂತ ಕರೆಯೋದು. ನಿಮಗೇನು ಅಭ್ಯಂತರ ಇಲ್ಲಾಂದ್ರೆ ನೀವೂ ಹಾಗೇ ಕರೀಬಹುದು. ಅದೂ ಬಿಟ್ಟು ಈ ಮೇಡಂ ಗೀಡಂ ಅಂತೆಲ್ಲ ಕರೆಯೋದು ಬೇಡ. ಎದೆಯ ಮೇಲಿದ್ದ ನೀಳ ಜಡೆಯನ್ನು ಹಿಂದಕ್ಕೆ ಹಾಕಿ ಹೇಳಿದಳು. ಅವರು ಇವತ್ತು ಬರೋದಿಲ್ಲ. ಇಲ್ಲೊಂದು ಮೀಟಿಂಗ್ ಮುಗಿಸಿ ಸಂಜೆ ಮುಂಬೈಗೆ ಹೋಗ್ತಾ ಇದ್ದಾರೆ. ನಾಳೆ ಸಂಜೆ ಅಥವಾ ನಾಡಿದ್ದು ಬೆಳಿಗ್ಗೆ ಮನೆಗೆ ಬರಬಹುದು. ಜಗನ್ನಾಥ್ ಇಲ್ಲವೆಂಬ ಮಾತು ರವಿತೇಜನನ್ನು ತಬ್ಬಿಬ್ಬುಗೊಳಿಸಿತು. ಬನ್ನಿ ನಿಮಗೆ ಔಟ್ ಹೌಸ್ ತೋರಿಸುತ್ತೇನೆ. ಮನೆಯ ಹಿಂದಿದ್ದ ಔಟ್ ಹೌಸ್ ಒಂದು ಪುಟ್ಟ ಬಂಗಲೆಯಂತಿತ್ತು. ಒಬ್ಬ ಇರುವುದಕ್ಕೆ ಇಷ್ಟು ದೊಡ್ಡ ಮನೆಯಾ? ರವಿತೇಜ ಕೇಳಿದ. ಜಾಹ್ನವಿ ನಕ್ಕಳು. ಅಲ್ರಿ ನಿಮ್ಮನ್ನು ಒಬ್ನೇ ಇರಿ ಅಂತ ಹೇಳಿದವರು ಯಾರು? ನೀವು ನಿಮ್ಮ ಹೆಂಡತಿ ಮಕ್ಳನ್ನು ಕರ್ಕೊಂಡು ಬಂದ್ರೂ ನಮ್ಮ ಒಬ್ಜೆಕ್ಷನ್ ಏನೂ ಇಲ್ಲ. ಅವಳ ಗಲ್ಲದಲ್ಲಿ ಮೂಡಿದ ಗುಳಿ ರವಿತೇಜನ ನೋಟವನ್ನು ಸೆಳೆಯಿತು. ಇಷ್ಟು ಬೇಗ ಸುಸ್ತಾದ್ರೆ ಹೇಗ್ರಿ? ನೀವು ಸುಸ್ತಾಗೋಕೆ ಈ ಮನೆಯಲ್ಲಿ ಇನ್ನೂ ಏನೇನು ಇದೆಯೋ ಮುಂದೆ ನೋಡೋಣ. ಮಧ್ಯಾಹ್ನ ಊಟಕ್ಕೆ ತಡವಾಗಿ ಬಂದ ರವಿತೇಜನನ್ನು ಡೈನಿಂಗ್ ಟೇಬಲ್ ಬಳಿ ಸೌಟು ಹಿಡಿದು ನಿಂತಿದ್ದ ಜಾಹ್ನವಿ ಗದರಿದಳು. ಏನ್ರಿ ಊಟಕ್ಕೆ ಬನ್ನಿ ಅಂತ ಹೇಳಿ ಬಂದ್ರೆ ಕರ್ಕೊಂಡು ಬರೋಕೆ ಜನ ಬೇಕಾ ನಿಮಗೆ? ನಾಳೆಯಿಂದ ಮನೆಯಲ್ಲಿ ಇದ್ರೆ ಮದ್ಯಾಹ್ನ ಒಂದೂವರೆಗೆ ಸರಿಯಾಗಿ ಡೈನಿಂಗ್ ಟೇಬಲ್ ಹತ್ರ ಇರ್ಬೇಕು. ಮತ್ತೆ ಡೈಲಿ ರಾತ್ರಿ ಎಂಟು ಗಂಟೆಗೆ ಊಟಕ್ಕೆ ಹಾಜರ್ ಆಗ್ಬೇಕು. ಅರ್ಥ ಆಯ್ತಾ? ಸೌಟು ಮುಖದ ಮುಂದೆ ಹಿಡಿದು ಹೇಳಿದಾಗ ರವಿತೇಜ ತಲೆ ಅಲ್ಲಾಡಿಸಿ ಮೆಲ್ಲಗೆ ಆಯ್ತು ಮೇಡಂ ಎಂದ. ಯಾರೀಕೆ ಜಾಹ್ನವಿ? ಜಗನ್ನಾಥ್ ಇಲ್ಲದ ಈ ಬೃಹತ್ ಮನೆಯಲ್ಲಿ ಈ ನೇರ ಮಾತಿನ ಹುಡುಗಿಯೊಂದಿಗೆ ರವಿತೇಜನ ಹೊಸ ಜೀವನ ಹೇಗೆ ಸಾಗಲಿದೆ? ಅವನ ಕಲ್ಪನೆಯ ಬೃಂದಾವನದ ಹುಡುಗಿಗೂ ಇವಳಿಗೂ ಏನಾದರೂ ಸಂಬಂಧವಿದೆಯೇ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

​ಆ ಕ್ಯಾನ್ವಾಸ್ ಮೇಲೆ ಮೂಡಿದ ದೃಶ್ಯವು ಒಂದು ಸುಂದರ ಕಾವ್ಯದಂತಿತ್ತು. ಮಂಜು ಮುಸುಕಿದ ಮುಂಜಾನೆ... ಚಿತ್ರದ ಮಧ್ಯಭಾಗದಲ್ಲಿ ಮಂಜಿನೆಡೆ....

     "ಅಗಜಾನನ ಪದ್ಮಾರ್ಕಮ್ ಗಜಾನನ ಅಹರ್ನಿಶಮ್ಅನೇಕ ದಂತಂ ಭಕ್ತಾನಾಮ್ ಏಕದಂತಂ ಉಪಾಸ್ಮಹೇ..." ಸಣ್ಣದಾಗಿ ಪಟಿಸುತ್ತಿದ್ದವಳು, ದೇವರ ಫೋಟೋಗೆ ಹೂವ...
09/07/2026


"ಅಗಜಾನನ ಪದ್ಮಾರ್ಕಮ್ ಗಜಾನನ ಅಹರ್ನಿಶಮ್
ಅನೇಕ ದಂತಂ ಭಕ್ತಾನಾಮ್ ಏಕದಂತಂ ಉಪಾಸ್ಮಹೇ..." ಸಣ್ಣದಾಗಿ ಪಟಿಸುತ್ತಿದ್ದವಳು, ದೇವರ ಫೋಟೋಗೆ ಹೂವು ಮುಡಿಸಿ ದೀಪ ಬೆಳಗಿದಳು. ಭಕ್ತಿಯಿಂದ ಕೈಜೋಡಿಸಿ ಪ್ರಾರ್ಥಿಸಿದವಳು, ಅಲ್ಲೇ ಇರಿಸಿದ್ದ ಕುಂಕುಮದ ಭರಣಿಯಿಂದ ಉಂಗುರದ ಬೆರಳದ್ದಿ ಕುಂಕುಮವನ್ನು ಮಾಂಗಲ್ಯಕ್ಕೆ ಹಚ್ಚಿ, ಬೈತಲೆಗಿರಿಸಿ, ಪುಟ್ಟ ಬೊಟ್ಟೊಂದನ್ನು ತನ್ನ ಬಿಂದಿಯ ಕೆಳಗಿಟ್ಟಳು.. ಅರಿಶಿನವನ್ನು ಕೂಡಾ ಮಾಂಗಲ್ಯಕ್ಕೆ ಹಚ್ಚಿ ಕೆನ್ನೆಗಳಿಗೆ ಹಚ್ಚಿಕೊಂಡವಳು ಮತ್ತೊಮ್ಮೆ ಕೈ ಮುಗಿದವಳು ಮಾಂಗಲ್ಯದೊಡೆಯನ ಶ್ರೇಯಸ್ಸಿಗೆ ಬೇಡಿದಳು...

"ಸಿಂಧೂರಾ..." ಕರೆದವನು ಮನದೊಡೆಯ... ಕುಳಿತಲ್ಲಿಂದ ಎದ್ದ ಸಿಂಧೂರ, ಅವನತ್ತ ತಿರುಗಿ

"ಜಿತು.. ಬನ್ನಿ... ಕೈ ಮುಗಿಯಿರಿ..." ಎಂದಳು..

ದೇವರ ಮನೆಯೊಳಗೆ ಬಂದವನು, ಕೈಮುಗಿದು ನಿಂತರೆ, ಅವಳು ಅವನನ್ನು ಕಣ್ಣು ತುಂಬಿಕೊಳ್ಳುತ್ತಾ ನಿಂತಳು..

ತೊಟ್ಟ ಕಡುನೇರಳೆ ಬಣ್ಣದ ಶರ್ಟು ಮತ್ತು ಕೆನೆ ಬಣ್ಣದ ಪ್ಯಾಂಟು ಅವನಿಗೆ ಒಪ್ಪವಾಗಿ ಒಪ್ಪುತ್ತಿತ್ತು... ಅವಳದ್ದೂ ಕೆನೆ ಬಣ್ಣದ ಸೀರೆ ಅದಕ್ಕೆ ತಿಳಿ ನೇರಳೆ ಬಣ್ಣದ ಕುಪ್ಪುಸ...

ಸಿಂಧೂರಳೆಡೆಗೆ ನೋಡಿದವನು,
"ತಿಂಡಿ ತಿಂದ್ಯಾ?" ಎಂದು ಅವಳ ತಲೆ ಸವರಿದನು..

"ಇಲ್ಲ ಜಿತು.. ಬನ್ನಿ.." ಎಂದು ದೇವರ ಕೋಣೆಯಿಂದ ಆಚೆ ಬಂದು ಅಡುಗೆ ಮನೆಗೆ ನಡೆದಳು ಸಿಂಧೂರ...

"ನಿನ್ನೆಯ ಹಿಟ್ಟು ಉಳಿದಿತ್ತು ಅದರಲ್ಲೇ ಎರಡು ನೀರುದೋಸೆ ಹಾಕಿಕೊಂಡೆ.. ಚಟ್ನಿ ಮಾಡುವಷ್ಟು ಟೈಮಿಲ್ಲ ಜಿತು.. ಪ್ಲೀಸ್ ಹಾಲು ಸಕ್ಕರೆ ಬೆರೆಸಿ ತಿಂದು ಬಿಡ್ತೀನಿ..." ಎಂದು ಕಣ್ಣು ಕಿರಿದು ಮಾಡಿ ನುಡಿದವಳು, ಅವನು ಪಕ್ಕನೆ ನಕ್ಕು

"ಅದೆಷ್ಟು ಸಲ ಹೇಳಿದ್ದೀನಿ ನಿನಗೆ... ನಾಯಿ ಮರಿ ಥರ ದೋಸೆಗೆ ಹಾಲು ಸಕ್ಕರೆ ಬೆರೆಸಿ ತಿಂತೀಯಲ್ಲಾ.." ಎಂದು ಗಂಭೀರತೆ ಬೆರೆಸಿ "ಅದರಲ್ಲೂ ಎರಡು ದೋಸೆ ಸಾಕೇನು?.." ಎಂದನು..

ಸಿಂಧೂರ,"ಅಜ್ಜ ನಾನು ತಿನ್ನೋದಿಲ್ಲ ಎಂದು ಹಠ ಹಿಡಿದಾಗ ಹೀಗೇ ಹಾಲು ಸಕ್ಕರೆ ಬೆರೆಸಿ ದೋಸೆ ಇಡ್ಲಿ ತಿನ್ನಿಸುತ್ತಿದ್ದರು ಜಿತು.. ಅದೇ ಇಷ್ಟ ನನಗೆ.." ಎಂದವಳು, ಸೋಫಾದ ಮೇಲೆ ಕುಳಿತು ತಿಂಡಿ ತಿಂದಳು.. ಅವಳ ಪಕ್ಕವೇ ಕುಳಿತಿದ್ದವ ಅವಳನ್ನೇ ನೋಡುವುದರಲ್ಲಿ ಮಗ್ನ...

ಸಿಂಧೂರ,
"ನಾಳೆ ನಾಲ್ಕನೇ ಶನಿವಾರ.. ಬ್ಯಾಂಕ್‌ಗೆ ರಜೆ.. ಹೇಳಿ ಎಲ್ಲಿಗೆ ಹೋಗೋಣ ಸುತ್ತಾಡೋಕೆ..." ಎಂದಳು ದೋಸೆ ಅಗಿಯುತ್ತಾ...

ಅವನು ಏನೋ ಯೋಚಿಸಿದಂತೆ,
"ಹ್ಮ್.... ಇಸ್ಕಾನ್ ಟೆಂಪಲ್???" ಎಂದನು..

ಸಿಂಧೂರ ಕಣ್ಣರಳಿಸಿ,
"ಅರೆ... ನನ್ನ ಮನಸ್ಸಲ್ಲೂ ಅದೇ ಇತ್ತು... ಅಲ್ಲಿಗೇ ಹೋಗೋಣ.." ಎಂದು ಕೈಗಡಿಯಾರ ನೋಡಿದಳು.. ಸಮಯ ಮೀರುತ್ತಿತ್ತು...

ಪಟಪಟನೇ ತಿಂದು ತಟ್ಟೆ ತೊಳೆದಿಟ್ಟವಳು, ಲಗುಬಗೆಯಿಂದ ಕೋಣೆಗೆ ಬಂದು ಕನ್ನಡಿಯ ಎದುರೊಮ್ಮೆ ನಿಂತುಕೊಂಡಳು...

ಅವಳ ಸಾತ್ವಿಕ ಚೆಲುವು ಸದಾ ತಂಪು ಬೀರುವ ಚಂದಿರನಂತೆ.. ನಿಷ್ಕಳಂಕ ಮೊಗ, ಏಳು ವಜ್ರಗಳ ಕೂರಿಸಿರುವ ಪುಟ್ಟ ಮೂಗುತಿ, ನಸುಗೆಂಪು ತುಟಿ ಬಣ್ಣ, ಕೆಳ ಬೆನ್ನು ತಲುಪಿ ತೂಗುವ ಜಡೆ, ಮುಡಿಯಲ್ಲಿ ಬೆರಳಿನಷ್ಟೇ ಉದ್ದದ ಮಲ್ಲಿಗೆ ದಂಡೆ, ಧರಿಸಿರುವ ಹತ್ತಿಯ ಸೀರೆ, ಕಿವಿಯಲ್ಲಿ ಅತೀ ಪುಟ್ಟ ಚಿನ್ನದ ಜುಮುಕಿ, ಕೊರಳಲ್ಲಿ ತೆಳುವಾದ ಒಂದೆಳೆಯ ಸರ.. ಪಕ್ಕದಲ್ಲಿ.. ಪಕ್ಕದಲ್ಲಿ ಕರಿಮಣಿಗಳೇ ಸಾಲು ಸಾಲಾಗಿ ಚಿನ್ನದೊಂದಿಗೆ ಪೋಣಿಸಲ್ಪಟ್ಟು ಕೂತಿರುವ, ಅಕ್ಕಪಕ್ಕ ಲಕ್ಷ್ಮಿ ಪದಕವಿದ್ದು ಮಧ್ಯೆ ತಾಳಿ ಬೊಟ್ಟು ಹೆಣೆದಿರುವ ಮಾಂಗಲ್ಯ ಸರ...

ಕನ್ನಡಿಯಲ್ಲಿ ತನ್ನನ್ನೊಮ್ಮೆ ಕಂಡವಳು, ನಗುವ ಮೊದಲೇ, ಅಲ್ಲಿದ್ದ ಟ್ಯಾಬ್ಲೆಟ್‌ಗಳಿರುವ ಡಬ್ಬದ ಕಡೆ ನೋಟ ಹರಿದಿತ್ತು... ಮೊಗದ ತುಂಬಾ ವಿಷಾದದ ಕರಿನೆರಳು... ಕಣ್ಣು ತುಂಬಿಕೊಂಡು ಮತ್ತೆ ಕನ್ನಡಿಯತ್ತ ನೋಡಿದಳು... ಹಿಂದೆಯೇ ನಿಂತಿರುವವನ ಪ್ರತಿಬಿಂಬ ಕಂಡಿತು.. 'ಮಾತ್ರೆ ತಗೋತೀಯಾ ಸಿಂಧೂರಾ?' ಎಂದು ಕೇಳಿದಂತಾಯಿತು ಅವನು...

ನಿಡಿದಾಗಿ ಉಸಿರು ದಬ್ಬಿದ ಸಿಂಧೂರ, ಟ್ಯಾಬ್ಲೆಟ್ ಡಬ್ಬವನ್ನು, ಬೀರುವಿನಲ್ಲಿ ಇಟ್ಟು ಬಾಗಿಲು ಮುಚ್ಚಿ,'ಮತ್ತೆ ನನ್ನ ಕಣ್ಣಿಗೆ ಬೀಳಕೂಡದು ಮಾತ್ರೆ...' ಎಂದು ಮಣಮಣಿಸುತ್ತಾ ಬ್ಯಾಗೆತ್ತಿಕೊಂಡಳು..

ಮತ್ತೆ ಕನ್ನಡಿ ನೋಡಿಕೊಂಡವಳು, ಎದೆಯಿಂದ ಇಳಿದು ತೂಗುತ್ತಿದ್ದ ಮಾಂಗಲ್ಯವನ್ನು, ಸೀರೆಯ ಸೆರಗಿನ ಒಳಗೆ ಇಳಿಸಿದವಳು,

"ಮಾಂಗಲ್ಯನ ಹಾಗೆಲ್ಲಾ ಎಲ್ಲರೂ ಕಾಣುವ ಹಾಗೆ ಪೂರ್ತಿಯಾಗಿ ಹೊರಗೆ ಬಿಟ್ಟರೆ ದೃಷ್ಟಿ ಆಗಿ ಬಿಡುತ್ತದೆ ಜಿತು..." ಎಂದು ಅವನ ಬಳಿ ಸರಿದಳು.....
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

"ಅಗಜಾನನ ಪದ್ಮಾರ್ಕಮ್ ಗಜಾನನ ಅಹರ್ನಿಶಮ್ ಅನೇಕ ದಂತಂ ಭಕ್ತಾನಾಮ್ ಏಕದಂತಂ ಉಪಾಸ್ಮಹೇ..." ಸಣ್ಣದಾಗಿ ಪಟಿಸುತ್ತಿದ್ದವಳು, ದೇವರ ಫೋಟೋಗೆ...

     ಪರೀಕ್ಷೆ ತುಂಬಾ ಸುಲಭ ಇತ್ತಲ್ವಾ? ಮಂದಾರಳ ಮುಖದಲ್ಲಿ ಗೆಲುವಿನ ನಗು ಅರಳಿತು. ಆದರೆ ತ್ರಿಷಿಕಾಳ ತಲೆ ಸಿಡಿಯುವಂತಿತ್ತು ಕಣ್ಣುಗಳು ಭಾರವಾಗಿ...
09/07/2026


ಪರೀಕ್ಷೆ ತುಂಬಾ ಸುಲಭ ಇತ್ತಲ್ವಾ? ಮಂದಾರಳ ಮುಖದಲ್ಲಿ ಗೆಲುವಿನ ನಗು ಅರಳಿತು. ಆದರೆ ತ್ರಿಷಿಕಾಳ ತಲೆ ಸಿಡಿಯುವಂತಿತ್ತು ಕಣ್ಣುಗಳು ಭಾರವಾಗಿದ್ದವು. ಬೇಗ ಮನೆಗೆ ಹೋಗೋಣ ನನಗೆ ತಲೆನೋವು... ಅವಳು ಎಂದೂ ಹೀಗಿರಲಿಲ್ಲ. ಪರೀಕ್ಷೆ ಎಂದರೆ ಭಯವೇ ಇರಲಿಲ್ಲ ಆದರೆ ಇಂದು ಉತ್ತರ ಪತ್ರಿಕೆ ಖಾಲಿ ತಲೆ ಖಾಲಿ. ದಿನಗಳು ಉರುಳಿದವು ರಜೆಯ ಬೇಸರ ಅವಳನ್ನು ಕಾಡುತ್ತಿತ್ತು ಏನೋ ಕಳೆದುಕೊಂಡಂತೆ ಪರಿತಪಿಸುತ್ತಿದ್ದಳು. ಅತ್ತಿಗೆ ಶುಭ ಸುದ್ದಿ ಏನು ಅಂತ ಬೇಗ ಹೇಳಿ! ಜಾನಕಿ ಕುತೂಹಲದಿಂದ ಕೇಳಿದರು. ಸುಮಿತ್ರಾ ಅತ್ತೆ ನಕ್ಕರು ನಮ್ಮ ತ್ರಿಷಾಗೆ ಒಳ್ಳೆಯ ಸಂಬಂಧ ಹುಡುಕಿದ್ದೀನಿ. ಶ್ರೀಮಂತ ಮನೆತನ ಹುಡುಗ ನೋಡಲು ತುಂಬಾ ಚೆಂದ! ಜಾನಕಿ ಸಂತೋಷದಿಂದ ಕುಣಿದರು ನನ್ನ ಮಗಳಂತೂ ಖಂಡಿತ ಒಪ್ಪುತ್ತಾಳೆ! ಆದರೆ ನನ್ನ ಮದುವೆನಾ? ತ್ರಿಷಿಕಾಳ ಮುಖದ ಬಣ್ಣ ಬದಲಾಗಿತ್ತು ಚಿಂತೆಯ ಗೆರೆಗಳು ಸ್ಪಷ್ಟವಾಗಿ ಮೂಡಿದ್ದವು. ಇಲ್ಲ ನನಗೆ ಇಷ್ಟು ಬೇಗ ಮದುವೆ ಬೇಡ. ನಾನು ಓದಬೇಕು ಕೆಲಸಕ್ಕೆ ಹೋಗಬೇಕು. ಸುಮಿತ್ರಾ ಅತ್ತೆ ಸಮಾಧಾನಪಡಿಸಲು ಪ್ರಯತ್ನಿಸಿದರು ಅದಕ್ಕೆಲ್ಲಾ ಅವರ ಕಡೆಯಿಂದ ಅಭ್ಯಂತರ ಇಲ್ಲ. ಮದುವೆಯಾದ ಮೇಲೂ ನೀನು ಓದಬಹುದು ಕೆಲಸಕ್ಕೆ ಹೋಗಬಹುದು. ಆದರೆ ತ್ರಿಷಿಕಾ ಮೌನವಾಗಿದ್ದಳು. ಸುಮಿತ್ರಾ ಅತ್ತೆಗೆ ಅನುಮಾನ. ಇವಳು ಯಾರನ್ನಾದರೂ ಪ್ರೀತಿಸುತ್ತಿದ್ದಾಳಾ? ಮರುದಿನವೇ ಮಂದಾರಳಿಗೆ ಕರೆ ಮಾಡಿದರು. ತ್ರಿಷಾ ಯಾರನ್ನಾದರೂ ಪ್ರೀತಿಸುತ್ತಿದ್ದಾಳಾ? ಇದು ಅವಳ ಭವಿಷ್ಯದ ಪ್ರಶ್ನೆ. ಮಂದಾರ ದೃಢವಾಗಿ ನಿರಾಕರಿಸಿದಳು ಇಲ್ಲ ಆಂಟಿ ಅವಳು ಆ ತರ ಹುಡುಗಿಯಲ್ಲ. ಐದು ವರ್ಷದಿಂದ ಅವಳ ಜೊತೆಗೇ ಇದ್ದೀನಿ ಯಾವ ಹುಡುಗನ ಜೊತೆಯೂ ಅವಳನ್ನು ನೋಡಿಲ್ಲ. ಸುಮಿತ್ರಾ ಅತ್ತೆ ಇನ್ನೂ ಗೊಂದಲದಲ್ಲಿದ್ದರು. ನಿನಗೆ ಮದುವೆ ಯಾಕೆ ಇಷ್ಟ ಇಲ್ಲ ಹೇಳು? ನೀನು ಬೇರೆ ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ. ತ್ರಿಷಿಕಾಳ ಉತ್ತರ ಒಂದೇ ಹಾಗೇನೂ ಇಲ್ಲ... ಅದೇ ಸಮಯಕ್ಕೆ ಶ್ರೀರಾಮಾನುಗ್ರಹ ದಲ್ಲಿ ಮದುವೆಯ ಚರ್ಚೆ ಜೋರಾಗಿತ್ತು. ಅಜ್ಜಿ ಅಣ್ಣನಿಗೆ ತಾನೇ ಹುಡುಗಿ ನೋಡ್ತಾ ಇರೋದು? ಹುಡುಗಿ ಎಲ್ಲಿ ನನ್ನನ್ನೇ ಒಪ್ಪಿಕೊಂಡು ಬಿಟ್ರೆ ಅದಕ್ಕೆ ನಾನು ಬರಲ್ಲ! ತುಷಾರ್ ನಕ್ಕ. ಬಾರೋ ಮೊಮ್ಮಗನೇ ಇಲ್ಲಿ ಅಜ್ಜಿ ಅವನ ಗುಳಿಕೆನ್ನೆಗೆ ಮುತ್ತಿಟ್ಟರು. ನನಗೆ ಡಿಂಪಲ್ ಬೀಳುವ ಹುಡುಗಿನೇ ಸಿಗಬೇಕು. ಆ ಗುಳಿಕೆನ್ನೆಗೆ ನಾನು ಮುತ್ತಿಡಬೇಕು! ತುಷಾರ್ ಕನಸಿನ ಲೋಕದಲ್ಲಿ ತೇಲಿದ. ವಿಶಾಖ್ ಅಣ್ಣ ನಕ್ಕ ಹಾಗೆ ಮಾಡಲು ಹೋದರೆ ನಿನ್ನ ಕೆನ್ನೆ ಮೇಲೆ ಅಚ್ಚು ಮೂಡಿರುತ್ತೆ ಅಷ್ಟೇ! ಅಜ್ಜಿ ಚಿಂತೆಯಿಂದ ನಿನ್ನ ಅಣ್ಣ ಮದುವೆಗೆ ಒಪ್ಪುತ್ತಾನ ಅಂತ ಭಯ ಆಗ್ತಾ ಇದೆ. ತುಷಾರ್ ಹುಂ ಅಜ್ಜಿ ಅವನು ಹುಡುಗಿ ನೋಡೋಕೆ ಒಪ್ಪಿದ್ದೆ ಹೆಚ್ಚು. ಎಲ್ಲರೂ ಮರುದಿನ ಹುಡುಗಿ ನೋಡಲು ಹೊರಟರು. ತ್ರಿಷಿಕಾಳ ಮನಸ್ಸಿನಲ್ಲಿ ಏನಿದೆ? ಅನಿರೀಕ್ಷಿತವಾಗಿ ಅನಿರೀಕ್ಷಿತ ತಿರುವು ಪಡೆದ ಈ ಸಂಬಂಧ ಎಲ್ಲಿಗೆ ತಲುಪಲಿದೆ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಇನ್ನೂ ಎದ್ದಿಲ್ವಾ ಮಗಳು ... ಗಂಟೆ ಏಳು ಗಂಟೆ ಆಗ್ತಾ ಬಂತು ಇಂದು ಅವಳಿಗೆ ಪರೀಕ್ಷೆ ಇದೆಯಂತೆ...ಮಗಳ ರೂಮ್ ನ ಬಾಗಿಲು ಇನ್ನೂ ಮುಚ್ಚಿಯೇ ಇದ್...

     "ನಿಹಾ ಈ ಭಾನುವಾರ ಸ್ವಲ್ಪ ಫ್ರೀ ಮಾಡ್ಕೊಳ್ಳೇ.ನಾನುಹೇಳಿದ ವಿಷಯ ನೆನಪಿದೆ ತಾನೇ?"ಎಂದು ಹರಿಣಿಯವರು ಕಾಲೇಜಿಗೆ ಹೋಗುವ ತರಾತುರಿಯಲ್ಲಿ ಬೇಕಾ...
08/07/2026


"ನಿಹಾ ಈ ಭಾನುವಾರ ಸ್ವಲ್ಪ ಫ್ರೀ ಮಾಡ್ಕೊಳ್ಳೇ.ನಾನು
ಹೇಳಿದ ವಿಷಯ ನೆನಪಿದೆ ತಾನೇ?"ಎಂದು ಹರಿಣಿಯವರು ಕಾಲೇಜಿಗೆ ಹೋಗುವ ತರಾತುರಿಯಲ್ಲಿ ಬೇಕಾಬಿಟ್ಟಿಯಾಗಿ ತಿನ್ನುತ್ತಿರುವ ಮಗಳಿಗೆ ಹೇಳಿದಾಗ, ನಿಹಾ ಒಲ್ಲದ ಉಪ್ಪಿಟ್ಟನ್ನು ಬಲವಂತವಾಗಿ ಬಾಯೊಳಗೆ ತುಂಬಿಕೊಳ್ಳುತ್ತಾ"ಅಮ್ಮಾ ಒಂದು ವಾರದಿಂದ ಹೇಳಿದ್ದೇ ಹೇಳ್ತಾ ಯಾಕೆ ನನ್ನ ತಲೆ ತಿನ್ತಿದ್ದೀಯಾ?ಹುಡುಗ ನೋಡೋಕೆ ಬರ್ತಾನಂದ್ರೆ,ಅದ್ಯಾಕಷ್ಟೊಂದು ಸಡಗರ ಸಂಭ್ರಮ ಪಡ್ತೀಯೋ ಏನೋ?ಅವರೂ ನಮ್ಮಂತೆ ಮನುಷ್ಯರೇ ತಾನೇ?....

ಬರ್ಲಿಬಿಡು,ಬಂದಾಗ ನೋಡಿಕೊಂಡರಾಯ್ತು.ಇಂಥಾ ವಿಷಯಕ್ಕೆ ಸುಮ್ಮನೇ ಎಗ್ಜೈಟ್ ಆಗೋ ಬದ್ಲು ಸ್ವಲ್ಪ ಅಡುಗೆ ತಿಂಡಿ ಚೆನ್ನಾಗಿ ಮಾಡೋದ್ರ ಕಡೆ ಗಮನ ಕೊಡು.ಈ ಉಪ್ಪಿಟ್ಟು ನನ್ನ ಗಂಟಲೊಳಗೆ ಇಳೀತಾನೇ ಇಲ್ಲ,ಇಷ್ಟೇ ಸಾಕಪ್ಪಾ ನಂಗೆ" ಎನ್ನುತ್ತಾ ತಟ್ಟೆಯಲ್ಲಿ ಅರ್ಧ ತಿಂಡಿಯನ್ನು ಹಾಗೇ ಉಳಿಸಿ,ಎದ್ದು ಕೈತೊಳೆಯಲು ಹೋಗುತ್ತಿರುವಾಗ, ಹರಿಣಿ,

"ಆಬ್ಬಾ ಅದೇನು ಹುಡುಗೀನೇ ನೀನು?ಅದ್ಯಾವ ತಿಂಡಿ ಆಡುಗೆ ಮಾಡಿದ್ರೂ ಹೆಸರಿಡದೇ ತಿನ್ನೋದೇ ಇಲ್ಲ ಅಲ್ವಾ? ಉಪ್ಟಿಟ್ಟಿಗೆ ಕಾಂಕ್ರೀಟ್ ಅಂದ್ರೆ,ದೋಸೆಗೆ ಕಲರ್ ಇಲ್ಲ ಮೆತ್ತಗಿಲ್ಲ ಕ್ರಿಸ್ಪಿಯಿಲ್ಲ ಅಂತೀಯ,ಇಡ್ಲಿ ಮಾಡಿದ್ರೆ ಇದು ಸರಿಯಾಗಿ ಬೆಂದಿಲ್ಲ ಅಂತಲೋ ಅಥವಾ ಇಡ್ಲಿ ತಿಂದ್ರೆ ಬೇಗ ಹೊಟ್ಟೆ ಹಸಿಯುತ್ತೆ ಅಂತಲೋ ಹೇಳ್ತೀಯ,ಇನ್ನು ರೊಟ್ಟಿ

ಚಪಾತಿ ಮಾಡಿದ್ರೆ ಅದಕ್ಕೆ ಈ ಪಲ್ಯ ಮಾಡ್ಬೇಕಿತ್ತು, ಈ ಚಟ್ನಿ ಮಾಡ್ಬೇಕಿತ್ತು ಅಂತ ತಲೆತಿನ್ತೀಯ,ರೈಸ್ ಐಟಮ್ಸ್ ಮಾಡಿದ್ರೆ ಡಯಟ್ ಮಾಡ್ತಿದ್ದೀನಿ ರೈಸ್ ತಿನ್ನಲ್ಲ ಅಂತೀಯಾ.ಇನ್ನು ನಿಂಗಿಷ್ಟವಾದ ಸಾರುಗಳು ಮಾಡೋದಂತೂ ದೊಡ್ಡ ತಲೆನೋವು.. ..

ಅಡುಗೆ ಮಾಡೋದಿರ್ಲಿ ಅಡುಗೆಮನೆ ಯಾವಕಡೆ ಇದೆ ಅಂತಲೇ ತಿಳಿದಿರದ ನಿನಗೆ,ಬರೀ ನನ್ನ ಅಡುಗೆಯಲ್ಲಿ ಹುಳುಕು ಹುಡೋಕದಷ್ಟೇ ಗೊತ್ತು.ನಿಂಗೂ ಈಗಾಗಲೇ ವಯಸ್ಸು ಇಪ್ಪತ್ತಮೂರಾಯ್ತು .ಈಗಲಾದ್ರೂ ಆ ಹಾಳಾದ ಮೊಬೈಲ್ ಲ್ಯಾಪ್ಟಾಪ್ ಓದು ಫ್ರೆಂಡ್ಸ್ ಅಂತ ಬರೀ ಅದ್ರಲ್ಲೇ ಇರದೇ,ಸ್ವಲ್ಪ ಹುಡುಗೀರ ಥರಾ ಅಡುಗೆ ರಂಗೋಲಿ ಹಾಡು ಕಸೂತಿ ಅಂತೆಲ್ಲಾ ಕಲಿ.ಹೀಗೇ ಏನೂ ಬರದಿದ್ರೆ ಯಾರು ಮದ್ವೆ ಆಗ್ತಾರೆ ನಿನ್ನಾ?"ಅನ್ನುತ್ತಿದ್ದರೆ,

ನಿಹಾರಿಕಾ ತನ್ನ ಮಾಮೂಲಿ ಧಾಟಿಯಲ್ಲಿ "ಅಮ್ಮಾ ನನ್ನ ಮದುವೆಯಾಗೊ ಹುಡುಗ ನನ್ನನ್ನು ಮನೆಕೆಲಸ ಅಡುಗೆಕೆಲಸಕ್ಕಾಗಿ ಮದ್ವೆಯಾಗೋದಾದ್ರೆ,ನಂಗೆ ಅಂಥಾ ಮದುವೆಯೂ ಬೇಡಾ ,ಹುಡುಗನೂ ಬೇಡಾ"ಅಂದವಳು"ನೀನ್ಯಾಕೆ
ಅದರ ಬಗ್ಗೆ ತಲೆಕೆಡಿಸಿಕೊಳ್ಥೀಯಾ?ಅದನ್ನು ಪಪ್ಪನಿಗೆ ಬಿಟ್ಬಿಡು"ಎಂದಾಗ,ಹರಿಣಿ

"ಹೂಂ ಈ ಮನೇಲಿ ನಾನೊಂಥರಾ ರಬ್ಬರ್ ಸ್ಟಾಂಪ್ ಇದ್ದಂಗೆ.ನಿಮ್ಮಗಳನ್ನು ಹೊತ್ತು ಹೆತ್ತಿದ್ದೆಲ್ಲಾ ಏನೂ ಅಲ್ಲ ಅಲ್ವಾ?ಪಪ್ಪಾನೇ ಎಲ್ಲಾ ನಿಂಗೆ"ಅಂದು ಸೆರಗಿನಿಂದ
ಕಣ್ಣು ಮೂಗು ವರೆಸಿಕೊಂಡಾಗ,ನಿಹಾರಿಕಾಗೆ ನಿಜಕ್ಕೂ ಬೇಸರವಾಗಿತ್ತು .ಅವಳ ಕೈಹಿಡಿದುಕೊಂಡು,

"ಸಾರಿ ಅಮ್ಮಾ,ನಾನು ಹೇಳಿದ್ದು ಆ ಅರ್ಥದಲ್ಲಲ್ಲಾ.
ನಿಂಗೂ ಗೊತ್ತಿದೆ ತಾನೇ ನಮ್ಮನೆ ಪರಿಸ್ಥಿತಿ?ಈ ವಿಷಯದಲ್ಲಿ ನನ್ನ ನಿನ್ನ ಅಭಿಪ್ರಾಯಕ್ಕಿಂತ,ಪಪ್ಪನ ಅಭಿಪ್ರಾಯವೇ ಮುಖ್ಯ ಹಾಗೂ ಫೈನಲ್.
ಅವರೇನು ಮಾಡಿದ್ರೂ ನನ್ನ ಒಳ್ಳೇದಕ್ಕೇ ತಾನೇ? ಹೀಗಾಗಿ ನಾವಿಬ್ರೂ ಸುಮ್ಮನೇ ಯಾಕೆ ತಲೆಕೆಡಿಸಿಕೊಳ್ಳೋದು ಅಂದೆ ಅಷ್ಟೇ"ಎಂದು ಅನುನಯಿಸಿದಾಗ, ಹರಿಣಿಯವರಿಗೆ ಅದೂ ನಿಜವೆನಿಸಿದರೂ, ಪತಿ ಮತ್ತು ಮಗಳ ಒಡಂಬಡಿಕೆ ಬಗ್ಗೆ ಅವರಿಗೆ ಅಸಹನೆ ಇದ್ದೇ ಇದೆಯಾದ್ದರಿಂದ,

"ನೀನು ಅಪ್ಪನ ಮಗಳು ಅಂತ ಗೊತ್ತಿದ್ರೂ
ಹೋಗಿ ಹೋಗಿ ನಿನ್ನ ಹತ್ರ ಮಾತಾಡ್ತೀನಲ್ಲಾ,
ನಂಗೆ ಬುಧ್ಧಿ ಇಲ್ಲ "ಅಂತ ಹಣೆಚಚ್ಚಿಕೊಂಡಾಗ,
ನಿಹಾರಿಕಾ ,

"ಸಧ್ಯ ಸ್ವಲ್ಪ ತಡವಾಗಿಯಾದರೂ ನಿಂಗದು ಗೊತ್ತಾಯ್ತಲ್ಲಾ!!"ಅಂತ ನಗುತ್ತಾ ಹೇಳಿದಾಗ ,
"ಅಯ್ಯೋ ಪಾಪಿ ಎಷ್ಟು ಮಾತಾಡ್ತೀಯೇ?"ಎಂದು ತನ್ನನ್ನು ಹೊಡೆಯಲು ಬಂದ ಅಮ್ಮನ ಕೈಗೆ ಸಿಗದಂತೆ ಹೊರಗೆ ಓಡಿಬಿಟ್ಟಿದ್ದಳು.ಸ್ಕೂಟಿಯಲ್ಲಿ ಹೊರಟು ಹೋದ ಮಗಳನ್ನೇ ಅರೆಕ್ಣಣ ನಿಂತು ನೋಡಿದವರು...
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

"ನಿಹಾ ಈ ಭಾನುವಾರ ಸ್ವಲ್ಪ ಫ್ರೀ ಮಾಡ್ಕೊಳ್ಳೇ.ನಾನು ಹೇಳಿದ ವಿಷಯ ನೆನಪಿದೆ ತಾನೇ?"ಎಂದು ಹರಿಣಿಯವರು ಕಾಲೇಜಿಗೆ ಹೋಗುವ ತರಾತುರಿಯಲ್ಲಿ ...

     ಬಾಗಿಲಿನಿಂದ ಒಳಗೆ ಸ್ಟೇಜ್ ತನಕ ಹಾಸಿರುವ ರೆಡ್ ಕಾರ್ಪೆಟ್, ಅಕ್ಕ ಪಕ್ಕದಲ್ಲಿ ಮನಸೂರೆಗೊಳಿಸುವಂತಹ ಹೂವಿನ ಅಲಂಕಾರ, ಸಂಭ್ರಮದಿಂದ ಓಡಾಡುವ ಹ...
08/07/2026


ಬಾಗಿಲಿನಿಂದ ಒಳಗೆ ಸ್ಟೇಜ್ ತನಕ ಹಾಸಿರುವ ರೆಡ್ ಕಾರ್ಪೆಟ್, ಅಕ್ಕ ಪಕ್ಕದಲ್ಲಿ ಮನಸೂರೆಗೊಳಿಸುವಂತಹ ಹೂವಿನ ಅಲಂಕಾರ, ಸಂಭ್ರಮದಿಂದ ಓಡಾಡುವ ಹೆಣ್ಣುಮಕ್ಕಳು, ಜವಾಬ್ದಾರಿಯಿಂದ ಓಡಾಡುವ ಗಂಡಸರು, ಸುಮ್ಮಸುಮ್ಮನೆ ಓಡುವ ಪುಟ್ಟ ಮಕ್ಕಳು... ಮದುವೆ ಮನೆಯ ಸಂಭ್ರಮ ಎಂದರೇ ಕೇಳಬೇಕೆ?!. ಅದರಲ್ಲೂ ಹೆಸರಾಂತ ಟೆಕ್ಸ್ ಟೈಲ್ ಕಂಪನಿಯ ಮಾಲಿಕ ಅಮರನಾಥ್ ರ ಮಗಳ ಮದುವೆ..

ಸುಂದರವಾಗಿ ಅಲಂಕೃತವಾಗಿದ್ದ ಸ್ಟೇಜ್ ನ ಹಿಂಭಾಗದಲ್ಲಿ " G&L" ಎಂಬ ಅಕ್ಷರಗಳು ವಧು ವರರನ್ನು ಸೂಚಿಸುತ್ತಿದವು. ಆಗಲೇ ಮಾಂಗಲ್ಯಧಾರಣೆ, ಧಾರೆ ಮುಗಿದು ಮುಂದಿನ ಕಾರ್ಯಕ್ರಮಗಳಿಗೆ ತಯಾರಾಗಲು, ಅತಿಥಿಗಳಿಂದ ಶುಭಾಶಯ ಸ್ವೀಕರಿಸಲು ತಯಾರಾಗಲು ತೆರಳಿದ್ದರು ಮದುಮಕ್ಕಳು.

ಅತಿಥಿಗಳು ಮದುವೆಯ ವೈಭವದ ಕುರಿತು ಮಾತನಾಡುತ್ತಿದರೆ, ಅಮರನಾಥ್ ಮತ್ತು ಅಜಯ್ ಕುಮಾರ್ ಅವರಿಗೆ ಎಲ್ಲಿಲ್ಲದ ಖುಷಿ. ಅಮರನಾಥ್ ಅವರಿಗೆ ಮಗಳ ಮದುವೆಯನ್ನು ಇನ್ನಷ್ಟೂ ವಿಜ್ರಂಭಣೆಯಿಂದ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದವರೂ ಆದರೆ ಮುದ್ದಿನ ಮಗಳು ಲಹರಿ ಆಯ್ದುಕೊಂಡಿದ್ದು ಸರಳ ವಿವಾಹವನ್ನು. ಇದು ಅವಳ ಪಾಲಿಗೆ ಅತಿಯೇ ಆದರೂ ಇಷ್ಟಿಲ್ಲದೆ ಹೇಗೆ ಎಂದು ತಂದೆ ಹಠ ಮಾಡಿದಾಗ ಮೌನವಾಗಿ ಸಮ್ಮತಿ ಸೂಚಿಸಿದ್ದಳು.

ಅಮರನಾಥ್ ಗೆ ಮಗಳ ಮೇಲೆ ಅತೀವ ಪ್ರೀತಿ..ವಿಚ್ಛೇದನದ ನಂತರ ಕೋರ್ಟ್ ನಲ್ಲಿ ಹೋರಾಡಿ ಮಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದರು. ಜೀವನದಲ್ಲಿ ಎಲ್ಲರಿಂದಲೂ ಮೋಸ ಹೋದ ಅವರಿಗೆ ಮಗಳು ಜೀವನ್ಮುಖಿಯಾಗಿದ್ದಳು. ವಿಚ್ಛೇದನದ ನಂತರ ಉದ್ಯಮವನ್ನು ಮತ್ತೆ ಆರಂಭಿಸಿದವರು ಎಲ್ಲೂ ಸೋಲದೆ ಮುನ್ನುಗ್ಗಿದ್ದರು..ಅದೃಷ್ಟ ಕೈ ಹಿಡಿದು, ಪರಿಶ್ರಮ ಫಲ ಕೊಟ್ಟಾಗ ಜೀವನದಲ್ಲಿ ಯಶಸ್ಸು ಅವರದಾಗಿತ್ತು..ಒಂದು ಕೊರತೆ ಬರದಂತೆ ಮಗಳಿಗೆ ಉತ್ತಮ ಜೀವನವನ್ನು ಕೊಟ್ಟಿದ್ದರು ಅಮರನಾಥ್.

ಗಾನವ್, ಅಜಯ್ ಕುಮಾರ್ ಮತ್ತು ಸೌಮ್ಯ ದಂಪತಿಗಳ ಜ್ಯೇಷ್ಠ ಸುಪುತ್ರ. ಮಗಳು ಪ್ರೀತಿ, ಪ್ರೇಮ ಯಾವುದರತ್ತವೂ ಗಮನ ಕೊಡದೆ, ಓದಿ, ಕೆಲಸ ಮಾಡುವಾಗ, ಮದುವೆಯ ಮಾತೆತ್ತಿದ್ದರು ಅಮರನಾಥ್.. ತಂದೆಯ ಆಯ್ಕೆಗೆ ಬಿಟ್ಟಿದ್ದಳು ಲಹರಿ...ಅತ್ತ ಗಾನವ್ ಕೂಡ ತಂದೆ ತಾಯಿಯ ಆಯ್ಕೆಯೇ ತನ್ನ ಆಯ್ಕೆ ಎಂದಿದ್ದನು. ಹೀಗೆ ವಿಧಿ ಒಂದು ಮಾಡಿದ ಜೋಡಿಯೇ ಗಾನವ್ - ಲಹರಿ.

ಟಿಪಿಕಲ್ ಆರೆಂಜ್ ಮ್ಯಾರೇಜ್ ಆಗಿದ್ದರೂ ಕೂಡಾ ಪಾಲಕರು ಅವರಿಗೆ ಆದಷ್ಟು ಸ್ವಾತಂತ್ರ್ಯ ಕೊಟ್ಟಿದ್ದರು. ಗಾನವ್ ಲಹರಿ ಇಬ್ಬರೂ ವೃತ್ತಿಯಲ್ಲಿ ಶಿಕ್ಷಕರು..ಗಾನವ್ ಲೆಕ್ಚರರ್ ಆದರೆ ಲಹರಿ ಪುಟ್ಟ ಮಕ್ಕಳಿಗೆ ಶಿಕ್ಷಣ ನೀಡುವ ವೃತ್ತಿಯನ್ನು ಆಯ್ದುಕೊಂಡಿದ್ದಳು, ಅವಳ ಸಂತೋಷಕ್ಕೆ. ಇಬ್ಬರದು ಒಂದೇ ಪ್ರೋಪೇಷನ್ ಜೊತೆಗೆ ಪ್ರಬುದ್ಧ ಮತ್ತು ಒಂದೇ ರೀತಿಯ ಆಲೋಚನೆಗಳು ಕೂಡ. ಎಂಗೆಜ್ಮೆಂಟ್ ನ ಮೊದಲು ಮತ್ತು ನಂತರ ಎರಡು ಬಾರಿ ಭೇಟಿಯಾದವರು ತಮ್ಮ ಅಭಿರುಚಿಗಳನ್ನು ಹಂಚಿಕೊಂಡಿದ್ದರು.

ಲಹರಿ "ನನಗೆ ಫ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಶೂಟ್ ಎಲ್ಲಾ ಇಷ್ಟವಾಗಲ್ಲ, ನಿಮಗೆ ಇಷ್ಟವಿದ್ದರೆ ಮಾಡಿಸೋಣ ಬೇಡವೆಂದರೆ ಆ ದುಡ್ಡನ್ನು ನನಗೆ ತಿಳಿದಿರುವ ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಊಟದ ಖರ್ಚಿಗೆ ಕೊಡೋಣ, ಫೋಟೋಶೂಟ್ ಮಾಡಿಸುವುದು ನೆನಪಿಗೆ ಅಲ್ಲವೆ? ಇದು ಒಂದು ಮರೆಯಲಾಗದ ನೆನಪಾಗಿ ಉಳಿಯುತ್ತದೆ.. ಈ ರೀತಿ ಎಷ್ಟು ಜನ ಮಾಡಿಕೊಳ್ಳುತ್ತಾರೆ.. ಹೇಳಿ" ಎಂದಾಗ, ಗಾನವ್ ಗೆ ಅವಳ ಮಾತು, ಎಲ್ಲದಕ್ಕಿಂತ ಹೆಚ್ಚಾಗಿ ಅವಳ ಗುಣ ಬಹಳ ಇಷ್ಟವಾಗಿತ್ತು.

"ನನಗೂ ಅದೆಲ್ಲ ಇಷ್ಟವಾಗಲ್ಲ, ನಿಮ್ಮ ಮಾತಿನಂತೆ ಆಗಲಿ" ಗಾನವ್ ಕೂಡ ಒಪ್ಪಿಗೆ ಸೂಚಿಸಿದಾಗ ಲಹರಿ ಖುಷಿ ಪಟ್ಟಿದ್ದಳು....
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಬಾಗಿಲಿನಿಂದ ಒಳಗೆ ಸ್ಟೇಜ್ ತನಕ ಹಾಸಿರುವ ರೆಡ್ ಕಾರ್ಪೆಟ್, ಅಕ್ಕ ಪಕ್ಕದಲ್ಲಿ ಮನಸೂರೆಗೊಳಿಸುವಂತಹ ಹೂವಿನ ಅಲಂಕಾರ, ಸಂಭ್ರಮದಿಂದ ಓಡಾ...

     “ಇಷ್ಟು ಬೇಗ ಐಡಿ ಕಾರ್ಡ್ ಹೇಗೆ ಸಿಕ್ಕಿತು?” ಅನನ್ಯಳ ಪ್ರಶ್ನೆ ನನ್ನನ್ನು ದಿಗ್ಭ್ರಮೆಗೊಳಿಸಿತು. ನನ್ನ ಕೈಯಲ್ಲಿದ್ದ ಹೊಚ್ಚ ಹೊಸ ಐಡಿ ಕಾರ್...
08/07/2026


“ಇಷ್ಟು ಬೇಗ ಐಡಿ ಕಾರ್ಡ್ ಹೇಗೆ ಸಿಕ್ಕಿತು?” ಅನನ್ಯಳ ಪ್ರಶ್ನೆ ನನ್ನನ್ನು ದಿಗ್ಭ್ರಮೆಗೊಳಿಸಿತು. ನನ್ನ ಕೈಯಲ್ಲಿದ್ದ ಹೊಚ್ಚ ಹೊಸ ಐಡಿ ಕಾರ್ಡನ್ನು ಅವಳು ಆಶ್ಚರ್ಯದಿಂದ ನೋಡುತ್ತಿದ್ದಳು. ಮೊದಲ ದಿನವೇ ಸಿಕ್ಕಿಹಾಕಿಕೊಂಡೆನೇ? ಉಗುಳು ನುಂಗಿದೆ. “ಅದೂ...” ನಾನು ಏನೋ ಸಮಜಾಯಿಷಿ ಕೊಡಲು ಯತ್ನಿಸುವಷ್ಟರಲ್ಲಿ ಯಾರೋ ಅನುಳನ್ನು ಮಾತನಾಡಿಸಿದರು. ಅವಳು ನನ್ನತ್ತ ಒಂದು ಕ್ಷಣ ಅನುಮಾನದಿಂದ ನೋಡಿ ನಂತರ ಏನೂ ಮಾತನಾಡದೆ ನನ್ನೊಟ್ಟಿಗೆ ಹೆಜ್ಜೆ ಹಾಕಿದಳು. ಸದ್ಯ ಬದುಕಿದೆ ಎಂದುಕೊಂಡೆ. ಬೆಂಗಳೂರಿಗೆ ಬಂದ ಮೊದಲ ದಿನವಿದು. ಭಾರದ್ವಾಜ ಗ್ರೂಪ್ ಆಫ್ ಕಂಪನೀಸ್‌ನಲ್ಲಿ ಹೊಸ ಕೆಲಸ. ಕೋಲಾರದಿಂದ ಹೊರಟು ಅಪಾರ್ಟ್‌ಮೆಂಟ್‌ಗೆ ತಲುಪಿ ನನ್ನ ರೂಮ್‌ಮೇಟ್ ಅನನ್ಯಳನ್ನು ಭೇಟಿಯಾಗಿದ್ದೆ. ಅವಳು ತುಂಬಾ ಸ್ನೇಹಮಯಿ ಆದರೆ ಈಗ ಅವಳ ಕಣ್ಣಲ್ಲಿ ಕಂಡ ಅನುಮಾನ ನನ್ನನ್ನು ಕಂಗೆಡಿಸಿತ್ತು. ನನ್ನ ಕ್ಯಾಬಿನ್ ಪಿಂಕ್ ಬಣ್ಣದಿಂದ ತುಂಬಿತ್ತು ಆದರೆ ಆ ಬಣ್ಣದ ಸೌಂದರ್ಯ ನನ್ನ ಮನಸ್ಸನ್ನು ತಲುಪಲಿಲ್ಲ. “ಹರ್ಷ ಸರ್!” ನನ್ನ ಮಾಜಿ ಲೆಕ್ಚರರ್ ಈಗ ನನ್ನ ಬಾಸ್. ಅವರನ್ನು ನೋಡಿದ ತಕ್ಷಣ ನನ್ನ ಹಳೆಯ ನೆನಪುಗಳು ಮರುಕಳಿಸಿದವು. ಆಕರ್ಷಣೆ ಇನ್ಫ್ಯಾಚುಯೇಷನ್... ಎಲ್ಲವನ್ನೂ ಮರೆತುಬಿಟ್ಟಿದ್ದೇನೆ ಎಂದುಕೊಂಡಿದ್ದೆ. ಆದರೆ ಅವರ ಕ್ಯಾಬಿನ್‌ನಿಂದ ಹೊರಬಂದಾಗ ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು. “ಕ್ಷಮಿಸಿ ಸರ್ ನಾನು ಹಾಗೆ ನಡೆದುಕೊಳ್ಳಬಾರದಿತ್ತು” ಎಂದು ಹೇಳಿದಾಗ ಅವರು ಏನೂ ಮಾತನಾಡದೆ ಅನನ್ಯಳಿಗೆ ನನ್ನ ಕ್ಯಾಬಿನ್ ತೋರಿಸಲು ಹೇಳಿದರು. ಮಧ್ಯಾಹ್ನದ ಊಟದ ಸಮಯದಲ್ಲಿ ಅನನ್ಯಳ ಮುಖದಲ್ಲಿ ಆತಂಕ. “ಒಂದು ಕೆಟ್ಟ ಹುಳು ಬಂದಿದೆ ಅದಕ್ಕೆ!!” ಅವಳ ಮಾತು ನನ್ನನ್ನು ಬೆಚ್ಚಿಬೀಳಿಸಿತು. ಮಕರಂದ್ ಪಾಂಡೆ ಹೆಚ್‌ಆರ್ ಹೆಡ್. ಹೆಣ್ಣುಮಕ್ಕಳಿಗೆ ನರಕ ತೋರಿಸುವವನು. “ನಿನ್ನೆ ರಾತ್ರಿ... ಅವನು ನನ್ನನ್ನು ಮುಟ್ಟಲು ಪ್ರಯತ್ನಿಸಿದ ಪ್ರಜ್ಞಾ... ಚಂದ್ರಣ್ಣ ಇರಲಿಲ್ಲ ಅಂದಿದ್ದರೆ...” ಅವಳ ಕಣ್ಣೀರು ನನ್ನ ಮಡಿಲನ್ನು ನೆನೆಸಿತು. ನನ್ನ ಕ್ಯಾಬಿನ್‌ಗೆ ಮರಳಿದಾಗ ಟೇಬಲ್ ಮೇಲಿದ್ದ ಫೈಲ್‌ಗಳ ಕೆಳಗೆ ಒಂದು ಕಾಗದ ಕಂಡಿತು. “ಸಿಸಿಕ್ಯಾಮೆರಾ ಇದೆಯೇ?” ಸುತ್ತಲೂ ನೋಡಿದೆ. ಇಲ್ಲ. ಆ ಕಾಗದವನ್ನು ಚೂರುಚೂರಾಗಿ ಹರಿದು ಡಸ್ಟ್‌ಬಿನ್‌ಗೆ ಹಾಕಿದೆ. ನನ್ನ ಬ್ಯಾಗಿನಲ್ಲಿದ್ದ ಮತ್ತೊಂದು ಮೊಬೈಲ್ ತೆಗೆದೆ. “ಹೇಗಿದೆ ಆಫೀಸ್?” ಮೆಸೇಜ್ ಬಂದಿತ್ತು. “ಚೆನ್ನಾಗಿದೆ” ಎಂದು ಉತ್ತರಿಸಿದೆ. “ಸೆಲ್ಫಿ ಪ್ಲೀಸ್!” ಆ ಮೆಸೇಜ್ ನೋಡಿ ನಕ್ಕೆ. ನಾನು ಇಲ್ಲಿರುವುದು ಕೇವಲ ಕೆಲಸಕ್ಕಲ್ಲ. ಅನನ್ಯಳ ಕಣ್ಣೀರಿಗೆ ಕಾರಣನಾದ ಮಕರಂದ್ ಪಾಂಡೆಗೆ ನಾನು ಪಾಠ ಕಲಿಸುತ್ತೇನೆಯೇ? ನನ್ನ ಬ್ಯಾಗಿನೊಳಗಿನ ಆ ರಹಸ್ಯ ಮೊಬೈಲ್‌ನಿಂದ ಮೆಸೇಜ್ ಕಳುಹಿಸುವ ಆ ವ್ಯಕ್ತಿ ಯಾರು? ಮತ್ತು ನಾನು ಹರಿದು ಹಾಕಿದ ಆ ಕಾಗದದಲ್ಲಿ ಏನಿದ್ದಿರಬಹುದು?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಬೆಂಗಳೂರು! ಮಾಯಾನಗರಿ! ಕನಸು ಕಂಗಳ ಯುವಜನಾಂಗದ ನೆಚ್ಚಿನ ತಾಣವನ್ನು ಬಸ್ ಪ್ರವೇಶಿಸಿತ್ತು. ಕೋಲಾರದಿಂದ ಬೆಂಗಳೂರಿಗೆ ಸುಮಾರು ಎರಡರಿಂ...

     "ಮನು... ಮನು.. ಎದ್ದೇಳೆ...‌ ಟೈಮ್ ಎಷ್ಟಾಗಿದೆ ಗೊತ್ತಾ..?" ಎಂದು ಕೇಳುತ್ತಲೆ ಅವಳ ಕೋಣೆಯನ್ನು ಪ್ರವೇಶಿಸಿದರು ಶೃತಿ. ಕಿಟಕಿಗೆ ಮುಚ್ಚಿದ...
08/07/2026


"ಮನು... ಮನು.. ಎದ್ದೇಳೆ...‌ ಟೈಮ್ ಎಷ್ಟಾಗಿದೆ ಗೊತ್ತಾ..?" ಎಂದು ಕೇಳುತ್ತಲೆ ಅವಳ ಕೋಣೆಯನ್ನು ಪ್ರವೇಶಿಸಿದರು ಶೃತಿ.
ಕಿಟಕಿಗೆ ಮುಚ್ಚಿದ್ದ ಪರದೆಯನ್ನು ಸರಿಸುತ್ತಾ ಸೂರ್ಯನ ಕಿರಣಗಳು ಕೋಣೆಯ ಒಳಗೆಲ್ಲ ಹರಡುವ ಹಾಗೆ ಮಾಡಿದವರು, "ಹೀಗೆ ಮುಖದ ತುಂಬಾ ಬೆಡ್ಶೀಟ್ ಹೊದ್ದುಕೊಂಡು ಮಲಗಿದ್ದೀಯಲ್ಲ, ಇವತ್ತು ಅದೇನೋ ಮುಖ್ಯವಾದ ಮೀಟಿಂಗ್ ಇದೆ, ಪ್ರೆಸೆಂಟೇಷನ್ ಕೊಡಬೇಕು, ಹಾಗೆ ಹೀಗೆ ಅಂತೆಲ್ಲ ಹೇಳ್ತಾ ಇದ್ದೆ, ಈಗ ನೋಡಿದ್ರೆ ಚಳಿ ಅಂತ ಬೆಚ್ಚಗೆ ಹೀಗೆ ಬೆಡ್ಶೀಟ್ ಹೊದ್ದುಕೊಂಡು ಮಲಗಿದ್ದಿಯಲ್ಲ, ಎದ್ದೇಳೆ" ಎನ್ನುತ್ತಾ ಬೆಡ್ಶೀಟ್ ಅನ್ನು ಸರಿಸಿ ನೋಡಿದ ಶ್ರುತಿ ಅವರಿಗೆ ಆಶ್ಚರ್ಯ ಕಾದಿತ್ತು. ಏಕೆಂದರೆ ಅವಳು ಅಲ್ಲಿರಲಿಲ್ಲ, ಮನುಷ್ಯ ಮಲಗಿರುವ ಹಾಗೆ ದಿಂಬುಗಳನ್ನು ಸಾಲಾಗಿ ಜೋಡಿಸಿ ಅದರ ತುಂಬಾ ಬೆಡ್ಶೀಟ್ ಅನ್ನು ಹೊದಿಸಿದವಳು ಅಲ್ಲಿಂದ ಮಾಯವಾಗಿದ್ದಳು.

"ಎಲ್ಲೋದ್ಲು ಇವಳು, ನೆನ್ನೆ ರಾತ್ರಿ ನೋಡಿದ್ರೆ ಬೆಳಗ್ಗೆ ಬೇಗ ಎಬ್ಬಿಸು ಆಫೀಸಿನಲ್ಲಿ ಮುಖ್ಯವಾದ ಮೀಟಿಂಗ್ ಇದೆ ಅಂತ ಹೇಳಿದ್ಲು, ಈಗ ನೋಡಿದ್ರೆ ದಿಂಬುಗಳನ್ನು ಈ ರೀತಿ ಇಟ್ಟು ಎಲ್ಲಿಗೆ ಹೋಗಿರಬಹುದು?" ಎಂದು ಯೋಚಿಸುತ್ತ ನಿಂತ ಶ್ರುತಿ ಅವರ ಕಣ್ಣಿಗೆ ಡ್ರೆಸ್ಸಿಂಗ್ ಟೇಬಲ್ ನ ಮೇಲೆ ಇರುವ ಒಂದು ಚೀಟಿ ಕಾಣಲು ಅದರತ್ತ ನಡೆದರು.

ಚೀಟಿ ಕೈಗೆತ್ತಿಕೊಂಡು ಅದನ್ನು ತೆರೆದು ನೋಡಲು "ಹಾಯ್ ಅಮ್ಮ ಗುಡ್ ಮಾರ್ನಿಂಗ್, ನನಗೆ ಗೊತ್ತು ಎಂದಿನ ಹಾಗೆ ಇವತ್ತು ಕೂಡ ನನ್ನನ್ನು ಎಬ್ಬಿಸುವುದಕ್ಕೆ ನೀನು ತಡವಾಗಿ ನನ್ನ ರೂಮಿಗೆ ಬಂದಿದ್ದೀಯ ಅಂತ, ಯಾವಾಗಲೂ ಹೀಗೆ ನಿನಗೆ ನಾನೆಂದರೆ ತುಂಬಾ ಮುದ್ದು, ಮಗಳು ಇನ್ನು ಸ್ವಲ್ಪ ಹೊತ್ತು ಮಲಗಲಿ ಅಂತ ನನ್ನನ್ನು ಎಬ್ಬಿಸುವುದನ್ನು ಮರೆತು ಬಿಡ್ತೀಯ, ಇದು ಮೊದಲನೇ ಸಲ ಎರಡು ಮೂರು ಬಾರಿ ನಡೆದಾಗ ನಾನು ಅಲಾರಂ ಇಟ್ಟುಕೊಳ್ಳುವ ಅಭ್ಯಾಸವನ್ನು ರೂಡಿಸಿಕೊಂಡೆ, ಆದರೆ ಆಗಲು ಸಹ ನೀನು ಹಾಗೆಲ್ಲಾ ಅಲಾರಂ ಇಟ್ಟುಕೊಂಡು ಎದ್ದೇಳಬೇಡ್ವೆ, ಕಷ್ಟಪಟ್ಟು ದುಡಿಯುತ್ತಾ ಇದ್ದೀಯಾ ನಿನ್ನನ್ನು ನಾನೇ ಬಂದು ಎಬ್ಬಿಸುತ್ತೇನೆ" ಅಂತ ಹೇಳಿದೆ ಹಾಗಾಗಿ ಅಲರಾಂ ಇಟ್ಟುಕೊಳ್ಳುವ ಅಭ್ಯಾಸವನ್ನು ನಾನು ನಿಲ್ಲಿಸಿ ಬಿಟ್ಟಿದ್ದೆ. ಆದರೆ ಇವತ್ತು ತುಂಬಾ ಮುಖ್ಯವಾದ ಮೀಟಿಂಗ್ ಇದೆ ನಾನು ಆಫೀಸಿಗೆ ಬೇಗನೆ ಹೋಗಲೇಬೇಕಿತ್ತು, ಇಲ್ಲಿ ಬಂದು ನನ್ನ ಟೀಮ್ ನವರ ಜೊತೆ ಇವತ್ತಿನ ಪ್ರೆಸೆಂಟೇಶನ್ ಬಗ್ಗೆ ಡಿಸ್ಕಸ್ ಮಾಡುವುದಿತ್ತು.

ಅದಕ್ಕೆ ನಾನು ಬೇಗನೆ ಅಲಾರಂ ಇಟ್ಟುಕೊಂಡು ಬೇಗನೆ ಎದ್ದು ತಯಾರಾಗಿ ನನ್ನ ರೂಮ್ ನಿಂದ ಹೊರಗೆ ಬಂದಾಗ ನೀನಿನ್ನು ನಿದ್ರೆಯಲ್ಲಿದ್ದೆ, ನಿನ್ನನ್ನು ಎಬ್ಬಿಸುವುದು ಬೇಡ ಎಂದುಕೊಂಡು ನಾನೇ ಹಾಲು ಬಿಸಿ ಮಾಡಿಕೊಂಡು ಕುಡಿದು ಫ್ರಿಜ್ ನಲ್ಲಿದ್ದ ಬ್ರೆಡ್ ತೆಗೆ್ಉ ಸ್ಯಾಂಡ್ವಿಚ್ ಮಾಡಿ ತಿಂದು ಬಂದಿದ್ದೇನೆ, ಹಾಗಾಗಿ ನನ್ನ ಹೊಟ್ಟೆಯ ಬಗ್ಗೆ ನೀನು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೂ ನಾನು ಮಲಗುವ ಜಾಗದಲ್ಲಿ ದಿಂಬುಗಳನ್ನು ಏಕೆ ಜೋಡಿಸಿಟ್ಟೆ ಎಂದ್ರೆ ರೂಮಿಗೆ ಬಂದ ತಕ್ಷಣ ನಾನಿಲ್ಲ ಎನ್ನುವುದು ನಿನಗೆ ಗೊತ್ತಾಗಿ ಗಾಬರಿಯಾಗಬಾರದಲ್ಲ, ನನ್ನನ್ನು ಎಬ್ಬಿಸಲೆಂದು ಬೆಡ್ಶೀಟ್ ತೆಗೆದು ದಿಂಬುಗಳನ್ನು ನೋಡಿದ ನಂತರ ನೀನು ಒಮ್ಮೆ ಕೋಣೆಯ ಸುತ್ತಲೂ ಕಣ್ಣಾಡಿಸುತ್ತಿಯಾ, ಆಗ ನಿನಗೆ ಈ ಚೀಟಿ ಸಿಗಲಿ ಅಂತ, ಮತ್ತೆ ಸಂಜೆ ಆದಷ್ಟು ಬೇಗ ಬರಲು ಪ್ರಯತ್ನಿಸುತ್ತೇನೆ.
ಇಂತಿ ನಿನ್ನ ಮುದ್ದು ಮಗಳು" ಎಂದು ಬರೆದು ನಿಲ್ಲಿಸಿದ್ದಳು.

"ಯಾವಾಗಲೂ ಹೀಗೆ ಮಾಡ್ತಾಳೆ ಏನೊ ಇವಳೊಬ್ಬಳೆ ದುಡಿದು ಆ ಕಂಪನಿಯನ್ನು ಉದ್ದಾರ ಮಾಡುತ್ತಿರುವ ಹಾಗೆ" ಎಂದುಕೊಂಡವರು ಕೊಣೆಯಿಂದ ಹೊರಗೆ ಹೋಗಲು ಬಾಗಿಲಿನ ಬಳಿ ಬಂದಾಗ ಇನ್ನೊಂದು ಚೀಟಿಯನ್ನು ಮಡಚಿ ಅಂಟಿಸಲಾಗಿತ್ತು. ಅದನ್ನು ಕೈಗೆತ್ತಿಕೊಂಡು ನೋಡಿದವರಿಗೆ "ಜಸ್ಟ್ ಟೇಬಲ್ ಮೇಲೆ ನಾನಿಟ್ಟಿರುವ ಚೀಟಿಯನ್ನು ಓದಿ ನಂತರ ನೀನು ಹೀಗೆ ಅಂದುಕೊಂಡಿದ್ದೆ ಅಲ್ವಾ, ಇವಳೊಂದು ಹುಡುಗಿ ಯಾವಾಗಲೂ ಹೀಗೆ ಮಾಡ್ತಾಳೆ, ಏನೋ ಇವಳೊಬ್ಬಳೆ ಕೆಲಸ ಮಾಡಿ ಆ ಕಂಪನಿಯನ್ನು ಉದ್ದಾರ ಮಾಡುವ ಹಾಗೆ ಅಂತ, ಹಾಗೆ ಅಂದುಕೊಂಡೆ ಅಲ್ವಾ ಶೃತಿ" ಎಂದು ಬರೆದು ಆಂಟಿಸಿದ್ದಳು. ಅದನ್ನು ನೋಡುತ್ತಲೇ ಶೃತಿ ಅವರ ಮುಖದಲ್ಲಿ ಒಂದು ನಗು ಮೂಡಿತ್ತು. ನಂತರ ತಮ್ಮ ಮಗನ ರೂಮಿಗೆ ಹೋಗಿ ಅವನನ್ನು ಎಬ್ಬಿಸುವ ಸಲುವಾಗಿ ಅತ್ತ ನಡೆದಿದ್ದರು....
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

"ಮನು... ಮನು.. ಎದ್ದೇಳೆ...‌ ಟೈಮ್ ಎಷ್ಟಾಗಿದೆ ಗೊತ್ತಾ..?" ಎಂದು ಕೇಳುತ್ತಲೆ ಅವಳ ಕೋಣೆಯನ್ನು ಪ್ರವೇಶಿಸಿದರು ಶೃತಿ. ಕಿಟಕಿಗೆ ಮುಚ್ಚಿದ್ದ .....

     ನನ್ನ ಪ್ರಾಣ ಸ್ನೇಹಿತನ ಪುಣ್ಯಕಾರ್ಯ ಕಣೇ ನಾಳೆ! ಪ್ರಾಣಕ್ಕೆ ಪ್ರಾಣ ಆಗಿದ್ದ ಆ ಪ್ರಾಣಕ್ಕೆ ಅಭಿನಂದನೆ ತಿಳಿಸೋ ದಿನ! ಶಿವಣ್ಣನ ಧ್ವನಿ ಅಡುಗ...
08/07/2026


ನನ್ನ ಪ್ರಾಣ ಸ್ನೇಹಿತನ ಪುಣ್ಯಕಾರ್ಯ ಕಣೇ ನಾಳೆ! ಪ್ರಾಣಕ್ಕೆ ಪ್ರಾಣ ಆಗಿದ್ದ ಆ ಪ್ರಾಣಕ್ಕೆ ಅಭಿನಂದನೆ ತಿಳಿಸೋ ದಿನ! ಶಿವಣ್ಣನ ಧ್ವನಿ ಅಡುಗೆಮನೆಯಿಂದ ಹೊರಬಂದ ಗೌರಮ್ಮನ ಕಿವಿಗೆ ಅಪ್ಪಳಿಸಿತು. ಅವನ ಕಣ್ಣಂಚಲ್ಲಿ ಮೂಡಿದ ನೀರನ್ನು ಟವಲ್‌ನಲ್ಲಿ ಒರೆಸಿಕೊಳ್ಳುತ್ತಾ ನನ್ ತಂಗಿ ತಾಳಿ ಭಾಗ್ಯನ ನಾನೇ ಕಿತ್ಕೊಂಡೆ ಅಂತ ದಿನ ಕೊರಗ್ತಾವ್ರೇ ಎಂದು ಗೊಣಗಿದ್ದು ಗೌರಮ್ಮನಿಗೆ ಮಾತ್ರ ಕೇಳಿಸಿತು. ಮಂಜು ಅವರನ್ನು ಕಳೆದುಕೊಂಡು ಹದಿನೈದು ವರ್ಷಗಳು ಕಳೆದಿವೆ. ನಾಳೆ ಅವರ ಪುಣ್ಯತಿಥಿ. ಶಿವಣ್ಣ ಪೇಪರ್ ಮೇಲೆ ಸಾಮಾನುಗಳ ಪಟ್ಟಿ ಬರೆಯುತ್ತಿದ್ದರೆ ಗೌರಮ್ಮ ಅಣ್ಣನಿಗೆ ಇಷ್ಟವಾದ ಸಿಹಿತಿಂಡಿ ತಯಾರಿಸುತ್ತಿದ್ದಳು. ಇದೇ ಸಮಯದಲ್ಲಿ ಸೀತಾಳ ಮನೆಯಲ್ಲಿ ಕುಮುದ ಕೂಡ ತನ್ನ ಗಂಡನ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಳು. ಐನೂರು ವರ್ಷಗಳ ಇತಿಹಾಸವಿರುವ ಶಿವಪಾರ್ವತಿ ದೇವಸ್ಥಾನದ ಶಾಂತ ವಾತಾವರಣದಲ್ಲಿ ಸೀತಾ ತನ್ನ ಗೆಳತಿ ನಂದಿನಿಗೆ ಇಲ್ಲಿ ರಾತ್ರಿ ಹತ್ತು ಗಂಟೆ ಆಗ್ತಿದ್ದಂಗೆಲ್ಲ ಬಾಗಿಲು ಮುಚ್ಚಿಬಿಡ್ತಾರೆ ಯಾಕಂದ್ರೆ ಇಲ್ಲಿರೋ ಶಿವಪ್ಪ ಹಾವಿನ ರೂಪದಲ್ಲಿ ರಾತ್ರಿ ಪೂರ್ತಿ ಓಡಾಡಿ ಸಮಾಧಾನ ಆದ್ಮೇಲೆ ಹೋಗಿ ತೊಟ್ಲಲ್ಲಿ ಮಲ್ಗ್ತಾನೆ ಅನ್ನೋದು ನಮ್ಮೂರಿನ್ ಜನಗಳ ನಂಬಿಕೆ ಎಂದು ಹೇಳುತ್ತಿದ್ದಳು. ಅಲ್ಲ ಅಮ್ಮ ಏನ್ ಇದು ಎರಡೆರಡು ಕೆಲಸ? ಮಾವನ ಕಾರ್ಯನ ಅಪ್ಪನೂ ಮಾಡ್ತಾರೆ ಅತ್ತೆನೂ ಮಾಡ್ತಾರೆ! ಯಾಕೆ? ಎಲ್ಲರೂ ಜೊತೇಲಿ ಸೇರಿ ಮಾಡುದ್ರೆ ಆಗಲ್ವಾ? ಕಿಟ್ಟಿ ಸೇಬಿನ ಹಣ್ಣು ತಿನ್ನುತ್ತಾ ಕೇಳಿದ. ಗೌರಮ್ಮನ ಮುಖದಲ್ಲಿ ನೋವು ಸುಳಿಯಿತು. ಜೊತೇಲಿ ಮಾಡೋ ಪುಣ್ಯ ನಮ್ಗಿಲ್ವಾಲ್ಲ! ಅತ್ಗೇಗ್ ಮುಖ ತೋರಿಸೋಕ್ ಆಗ್ದೇ ನಿಮ್ ಅಪ್ಪ ಆ ಮನೆ ಕಡೆನೆ ಹೋಗ್ದೇ ಕೂತಿದ್ದಾರೇ. ಹರಿತಿರೋ ನಮ್ ಈ ನೋವಿನ್ ನದಿಗಳಿಗೆ ನೀವೇ ಸಂತೋಷದ್ ಸೇತುವೆ! ಅದಿಕೆ ನಿನ್ಗು ಸೀತಾಗು ಬೇಗ ಮದ್ವೆ ಮಾಡಿ ದಿಕ್ಕಾಪಾಲಾಗಿರೋ ಸಂಸಾರನ ಒಂದ್ ಮಾಡ್ಬೇಕು ಅಂತ ನಿಮ್ ಅಪ್ಪ ಅಷ್ಟು ಒದ್ದಾಡೋದು. ಅದೇ ದಿನ ಕಾಲೇಜಿನಲ್ಲಿ ನಂದಿನಿ ಸುಕನ್ಯಾ ಟೀಚರ್‌ಗೆ ತನ್ನ ಅಣ್ಣ ಸುನಿಲ್ ಕೊಟ್ಟ ಪ್ರೇಮಪತ್ರವನ್ನು ಗುಟ್ಟಾಗಿ ನೀಡಿದಳು. ಏನ್ ನಂದಿನಿ ನೀನು ಬಹಿರಂಗವಾಗಿ ಕೊಡ್ತಿದಿಯಲ್ಲ! ಯಾರಾದ್ರೂ ನೋಡಿದ್ರೆ ಮುಗಿಯಿತು ನಮ್ ಕಥೆ! ಸುಕನ್ಯಾ ಭಯದಿಂದ ಪತ್ರವನ್ನು ಬ್ಯಾಗಿನೊಳಗೆ ತಳ್ಳಿದಳು. ಸೀತಾ ಬಂದಾಗ ಅಯ್ಯೋ ಹುಚ್ಚಿ ನಿನ್ಗ್ ಸೂಕ್ಷ್ಮತೆನೆ ಅರ್ಥ ಆಗಲ್ವಾ? ಮೊದ್ಲೇ ಆ ಪಟೇಲ ಮಗಳ ಮೇಲೆ ಕಣ್ಗಾವಲುಗಳನ್ನ ಇಟ್ಟಿದ್ದಾನೇ ಹುಷಾರು! ಎಂದು ಎಚ್ಚರಿಸಿದಳು. ಕಿಟ್ಟಿ ಮತ್ತು ಸೀತಾ ಅವರ ಪ್ರೀತಿ ಈ ಒಡೆದ ಕುಟುಂಬಗಳನ್ನು ಮತ್ತೆ ಒಂದು ಮಾಡುವುದೇ? ಮತ್ತು ಪಟೇಲನ ಕಣ್ಗಾವಲಿನಲ್ಲಿ ಸುನಿಲ್ ಮತ್ತು ಸುಕನ್ಯಾ ಅವರ ಪ್ರೀತಿ ಬದುಕುಳಿಯುವುದೇ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

"ಐದುನೂರು ವರುಷಗಳ ಇತಿಹಾಸ ಇರುವ ಪುರಾತನ ಶಿವಪಾರ್ವತಿಯ ದೇವಸ್ಥಾನ!! ಮಕ್ಕಳಿಲ್ಲದವರಿಗೆ, ಮದುವೆಯಾಗದವರಿಗೆ, ಕುಟುಂಬ ಸಮಸ್ಯೆ ಇರುವವ.....

     ಹಿಮ ಮುಸುಕಿದ ನಾಡಿನಲ್ಲಿ ಚಳಿಯ ಅಬ್ಬರ. ತುಂತುರು ತುಂತುರಾಗಿ ಸುರಿಯುತ್ತಿರುವ ಮುತ್ತಿನ ಹಿಮ ಮಣಿಗಳ ನೋಡುತ್ತಾ ಪ್ರಕೃತಿಯ ಕೌತುಕವನ್ನು ಕಂ...
08/07/2026


ಹಿಮ ಮುಸುಕಿದ ನಾಡಿನಲ್ಲಿ ಚಳಿಯ ಅಬ್ಬರ. ತುಂತುರು ತುಂತುರಾಗಿ ಸುರಿಯುತ್ತಿರುವ ಮುತ್ತಿನ ಹಿಮ ಮಣಿಗಳ ನೋಡುತ್ತಾ ಪ್ರಕೃತಿಯ ಕೌತುಕವನ್ನು ಕಂಡು ಮಂತ್ರ ಮುಗ್ಧಳಾಗಿ ನಿಂತಿದ್ದಾಳೆ ನೇಹಾ.

"ನೇಹಾ..., ನಿನ್ನ ಕ್ಯಾಬಿನ್ ಬ್ಯಾಗ್ ತೂಕ ಎಷ್ಟಿದೆ ನೋಡು. ಬೇಗ... ಬಂಗಾರಿ, ಟೈಮ್ ಆಗ್ತಿದೆ.. ಹಾಗೆ ನಿನ್ನ ಬೋರ್ಡಿಂಗ್ ಪಾಸ್ ಎಲ್ಲಾ ಸರಿಯಾಗಿ ಇಟ್ಕೊ."

ಸ್ನೇಹ ಒಂದೇ ಉಸಿರಿನಲ್ಲಿ ರೂಮಿನಿಂದ ಹಾಲ್ ಗೆ ಓಡಾಡುತ್ತಲೇ ತನ್ನ ತಂಗಿ ನೇಹಾ ಳ ಪ್ರಯಾಣದ ಸಿದ್ಧತೆಯನ್ನು ತರಾತುರಿಯಿಂದ ಮಾಡುತ್ತಿದ್ದವಳು, ಪೋರ್ಟಿಕೋದಲ್ಲಿ ಮೈಮರೆತು ನಿಂತಿದ್ದ ನೇಹಾಳತ್ತ ತನ್ನ ಗಮನ ಹರಿಸುವಳು.

ಮೆಲ್ಲನೆ ಅವಳತ್ತ ಹೋಗಿ ಹಿಂಬದಿಯಿಂದ ನೇಹಾಳ ತಬ್ಬುವ ಸ್ನೇಹ...

"ಎಷ್ಟು ಚೆನ್ನಾಗಿದೆ ನೋಡು ನಮ್ಮೂರಿನ ಹಿಮದ ಮಳೆ..! ಈ ಮುದ್ದು ಬಂಗಾರಿಯನ್ನ ಮುತ್ತಿಡಲು ಹವಣಿಸುತ್ತಿದೆ. ಇದೆಲ್ಲ ನೋಡಿ ಇಲ್ಲೇ ಇರ್ಬೇಕು ಅಂತ ಅನ್ನಿಸ್ತಿದ್ಯ ಬಂಗಾರಿ..! "

"ಅಕ್ಕಾ.., ಈ ಹಿಮದ ಮಳೆ ಮುಂದೆ ನಮ್ಮೂರಿನ ಇಬ್ಬನಿ ಹಾಸೇ ಎಷ್ಟೋ ಚೆಂದ ಅಲ್ವೇನೆ...! ನಮ್ಮೂರಿನ ಚಳಿ, ಬಿಸಿಲಿನ ಜಳ, ಅಬ್ಬಾ...! ನಂಗೆ ನಮ್ಮೂರ ಚಳಿಯೇ ಚೆಂದ. "

"ನೀನ್ ಬಿಡು.. ನಮ್ಮ ರಾಮನಾಥಪುರದ ಗುಬ್ಬಿ ಮರಿ.. ಪ್ರಪಂಚದ ಜ್ಞಾನವೂ ಇಲ್ಲ ಗಂಧವೂ ಇಲ್ಲ.. ನಿನಗೆ ನಾನು ಹೇಗೆ ಅರ್ಥ ಮಾಡಿಸಿ ಹೇಳಲೋ.. ಗೊತ್ತಾಗ್ತ ಇಲ್ಲ. ಹೋಗ್ಲಿ ಬಿಡು, ನಾನು ಆಡಿದ ಮಾತುಗಳಾದ್ರು ನಿನಗೆ ಕೇಳಿಸ್ತಾ...! "

" ಕೇಳಿಸ್ತು.. ಬೋರ್ಡಿಂಗ್ ಪಾಸ್ ತಗೊಂಡಿದ್ದೀನಿ. ಮತ್ತೆ, ಕ್ಯಾಬಿನ್ ಬ್ಯಾಗ್ ತೂಕ ಕೂಡ ಸರಿಯಾಗಿ ಇದೆ. ಭಾವ ಎಲ್ಲಾ ನೋಡಿ ಇಟ್ಟಿದ್ದಾರೆ. ನೀನು ಟೆನ್ಷನ್ ಮಾಡ್ಕೋಬೇಡ ಅಕ್ಕಾ.."

ಮುದ್ದಾಗಿ ನುಡಿಯುವ ನೇಹಾ, ತನ್ನ ಲಗೇಜ್ ಜೊತೆಗೆ ರೂಮಿನಿಂದ ಹೊರ ಬಂದು ನಿಂತರೆ ಸ್ನೇಹ ಅವಳ ಬಳಿ ಬಂದು ನಿಲ್ಲುವಳು.

"ಹುಷಾರು ನೇಹಾ, ಒಬ್ಬಳೇ ಫ್ಲೈಟ್ ಜರ್ನಿ ಮಾಡ್ತಿದ್ದಿ. ಇಂಟರ್ ನ್ಯಾಷನಲ್ ಏರ್ಪೋರ್ಟ್ ನಲ್ಲಿ ಯಾರೊಂದಿಗೂ ಮಾತಾಡ್ಬೇಡ. ಅಪರಿಚಿತರು ಬ್ಯಾಗ್ ಎಲ್ಲಾ ಕೊಟ್ರೆ ತಗೋಬೇಡ. ಫ್ಲೈಟ್ ಯಿಂದ ಇಳಿದ ಕೂಡಲೇ ಅಲ್ಲಿ ಗೈಡ್ ಮಾಡೋಕೆ ಅಂತ ಇರ್ತಾರೆ.. ನೀನು ಎಲ್ಲವನ್ನು ಗಮನಿಸಿ ನೋಡ್ಕೊಂಡು ಹೋಗು ಆಯ್ತಾ..."

"ಅಯ್ಯೋ... ಸಾಕು ಸ್ನೇಹ. ಎಷ್ಟು ಬಾರಿ ಹೇಳಿದ್ದನ್ನೇ ಹೇಳ್ತಿ..!ಅವಳಿಗೆ ತುಂಬಾ ಹೆದರಿಸ ಬೇಡ, ಅವಳೇನು ಚಿಕ್ಕ ಮಗುನಾ..! ಇಲ್ಲಿಗೆ ಬರುವಾಗ ಅವಳು ಏರ್ಪೋರ್ಟ್ ದಾಟಿಯೇ ಬಂದಿರೋದು.

ಅವಳಿಗೆ ಫ್ಲೈಟ್ ಜರ್ನಿಯ ಎಲ್ಲಾ ಅನುಭವ ಆಗಿದೆ ಅಲ್ವಾ.. ಡೋಂಟ್ ವರಿ.. ನನ್ನ ನಾದಿನಿ ಬ್ರೇವ್..! ಹೋಗ್ತಾಳೆ ಒಬ್ಳೆ. ಏನ್ ನೇಹಾ..?"

ಎಂದ ಸಂಚಿತ್ ಮಾತಿಗೆ ನೇಹಾ...

"ಹೂಂ.. ಭಾವ ಹೋಗ್ತೀನಿ ಒಬ್ಳೆ. "

ಎಂದವಳ ಮನಸ್ಸಿನಲ್ಲಿ ಆಗಲೇ ಭಯದ ಅಳುಕು ಹೊಟ್ಟೆಯನ್ನು ಹಿಂಡುತ್ತಿತ್ತು.

ಸಂಚಿತ್ ನ ಮಾತಿಗೆ ಸಮಾಧಾನಗೊಳ್ಳದ ಸ್ನೇಹಳ ಮನಸ್ಸು ಮಾತ್ರ ತಂಗಿಯನ್ನು ಪಾಪದ ಕೂಸೆಂದು ಅಳುಕು ಪಡುತ್ತಿತ್ತು....
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಸಂಚಿಕೆ ೧ ಹಿಮ ಮುಸುಕಿದ ನಾಡಿನಲ್ಲಿ ಚಳಿಯ ಅಬ್ಬರ. ತುಂತುರು ತುಂತುರಾಗಿ ಸುರಿಯುತ್ತಿರುವ ಮುತ್ತಿನ ಹಿಮ ಮಣಿಗಳ ನೋಡುತ್ತಾ ಪ್ರಕೃತಿಯ...

     “ಹ್ಯಾಪಿ ಹೋಲಿ!” ವಿದ್ಯಾಳ ಗಂಟಲು ಸೀಳುವಂತೆ ಕೂಗಿತು. ಬಾಗಿಲ ಚಿಲಕವನ್ನು ನಿಧಾನವಾಗಿ ತೆಗೆದು ಅವಳು ಹಿಡಿದಿದ್ದ ಬಕೇಟ್ ನೀರನ್ನು ಒಂದೇ ಸಮ...
08/07/2026


“ಹ್ಯಾಪಿ ಹೋಲಿ!” ವಿದ್ಯಾಳ ಗಂಟಲು ಸೀಳುವಂತೆ ಕೂಗಿತು. ಬಾಗಿಲ ಚಿಲಕವನ್ನು ನಿಧಾನವಾಗಿ ತೆಗೆದು ಅವಳು ಹಿಡಿದಿದ್ದ ಬಕೇಟ್ ನೀರನ್ನು ಒಂದೇ ಸಮನೆ ಹೊರಗೆ ಸುರಿದಳು. ಆದರೆ ಅವಳು ಕಣ್ಣು ಬಿಟ್ಟು ನೋಡಿದಾಗ ಅಲ್ಲಿ ಸಣ್ಣ ಮಕ್ಕಳಿರಲಿಲ್ಲ. ಬದಲಿಗೆ ಆರು ಅಡಿ ಎತ್ತರದ ಗಾಗಲ್ಸ್ ಧರಿಸಿದ ಯುವಕನೊಬ್ಬ ಅವನ ಬಿಳಿ ಶರ್ಟ್ ಹಳದಿ ಬಣ್ಣಕ್ಕೆ ತಿರುಗಿ ಅವಳನ್ನೇ ದಿಟ್ಟಿಸಿ ನಿಂತಿದ್ದ. ವಿದ್ಯಾಳ ಮುಖದಲ್ಲಿ ಆಘಾತ. ಅವಳ ಕೈಯಲ್ಲಿದ್ದ ಖಾಲಿ ಬಕೇಟ್ ನೆಲಕ್ಕೆ ಬಿದ್ದಿತು. ಇದು ಹೋಳಿ ಹಬ್ಬದ ಬೆಳಗು. ರಜೆಯ ದಿನವೂ ಆರಾಮಾಗಿ ಮಲಗಲು ಬಿಡದ ಮಕ್ಕಳ ಮೇಲೆ ಸಿಟ್ಟಾಗಿದ್ದ ವಿದ್ಯಾ ಅವರ ಕಾಟಕ್ಕೆ ಬೇಸತ್ತು ಈ ‘ಪಾಠ’ ಕಲಿಸಲು ಸಿದ್ಧಳಾಗಿದ್ದಳು. ಆದರೆ ಈಗ ಅವಳ ಎದುರು ನಿಂತಿದ್ದವನು ಮಕ್ಕಳಲ್ಲ ಅವಳ ಅಣ್ಣ ವಿನೋದನ ಬಾಲ್ಯದ ಗೆಳೆಯ ಅವಿನಾಶ್ ಪ್ರಸಾದ್! ವಿದ್ಯಾಳ ಅಮ್ಮ ಪೂರ್ಣಿಮಾ ಹೊರಗೆ ಬಂದು “ಯಾರಪ್ಪಾ ಇವರು? ಏನ್ ಮಾಡ್ದೆ ಇವರಿಗೆ?” ಎಂದು ಗಾಬರಿಯಿಂದ ಕೇಳಿದರು. ವಿದ್ಯಾ ತಕ್ಷಣವೇ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದಳು. “ಅಮ್ಮಾ... ಕೊರಿಯರ್ ಬಾಯ್ ಅನಿಸುತ್ತೆ... ಸರ್ ಹೋಲಿ ಅಲ್ವಾ? ಸಾರಿ ಸರ್ ಗೊತ್ತಾಗಲಿಲ್ಲ. ಕೊರಿಯರ್ ಕೊಡಿ...” ಎಂದಳು. ಅವಿನಾಶ್ ವಿದ್ಯಾಳ ಮುಖವನ್ನು ಗುರಾಯಿಸುತ್ತಾ “ನಮಸ್ಕಾರ ಆಂಟಿ... ನಾನು ಕೊರಿಯರ್ ಬಾಯ್ ಅಲ್ಲ ವಿನೋದ್ ಫ್ರೆಂಡ್ ಅವಿನಾಶ್ ಪ್ರಸಾದ್!” ಎಂದನು. ಆ ಹೆಸರು ಕೇಳಿದ ತಕ್ಷಣ ವಿದ್ಯಾಳ ತಲೆಯಲ್ಲಿ ಮಿಂಚು ಹೊಳೆಯಿತು. “ಅವಿ” ಎಂಬ ಹೆಸರಿನಲ್ಲಿ ಅವಳಿಗೆ ಮೆಸೇಜ್ ಮಾಡಿ ಅವಳ ಅಣ್ಣನ ಹುಟ್ಟುಹಬ್ಬವನ್ನು ನೆನಪಿಸಿ “ಪ್ರಪೋಸ್ ಮಾಡ್ತ್ಯಾ? ನಿನ್ ಕೈಲಿ ಅದೊಂದೇ ನೆಟ್ಟಗೆ ಮಾಡೋಕೆ ಬರೋದು” ಎಂದು ಅಣಕಿಸಿದ್ದವನು ಇವನೇ! ಅವಳ ಅಣ್ಣನ ಬರ್ತ್‌ಡೇ ಬಗ್ಗೆ ಅವಳ ಕನಸಿನ ಪ್ರಪೋಸಲ್ ಬಗ್ಗೆ ಇವನಿಗೆ ಹೇಗೆ ಗೊತ್ತು ಎಂದು ಅವಳು ತಲೆ ಕೆಡಿಸಿಕೊಂಡಿದ್ದಳು. ಈಗ ಅವನು ಇಲ್ಲಿ ಅವಳ ಮನೆಯ ಬಾಗಿಲಲ್ಲಿ! ವಿದ್ಯಾಳ ಅಮ್ಮನಿಗೆ ಅವಿನಾಶ್ ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದು ಬಾಡಿಗೆ ಮನೆ ಹುಡುಕುತ್ತಿದ್ದಾನೆ ಎಂದು ವಿನೋದ್ ಹೇಳಿದ್ದ ನೆನಪಾಯಿತು. “ನಮ್ಮನೇಲೆ ಇರೋಕೆ ಹೇಳಬೇಕಿತ್ತು ಹೇಗಿದ್ದರೂ ನೀನು ಅವನು ತುಂಬಾ ವರ್ಷದ ಸ್ನೇಹಿತರು...” ಎಂದು ಪೂರ್ಣಿಮಾ ಹೇಳಿದ್ದ ಮಾತು ವಿದ್ಯಾಳ ಕಿವಿಯಲ್ಲಿ ಗುಯ್ಗುಟ್ಟಿತು. ಅವಿನಾಶ್‌ನ ಕಣ್ಣುಗಳಲ್ಲಿನ ಕುಚೇಷ್ಟೆ ಅವನ ಮುಖದಲ್ಲಿನ ಮಂದಹಾಸ ವಿದ್ಯಾಳನ್ನು ಇನ್ನಷ್ಟು ಕಂಗೆಡಿಸಿತು. ಅವಳು ಅವನ ಹೆಸರನ್ನು ಕೇಳಿದ ತಕ್ಷಣವೇ ಬಿದ್ದುಬಿಟ್ಟಳು. ಅವಿನಾಶ್‌ನ ಈ ಅನಿರೀಕ್ಷಿತ ಆಗಮನ ವಿದ್ಯಾಳ ಜೀವನದಲ್ಲಿ ಯಾವ ತಿರುವು ತರಲಿದೆ? ಶ್ರವಣ್ ಪುರೋಹಿತ್‌ನನ್ನು ಭೇಟಿಯಾಗುವ ಅವಳ ಕನಸು ಈ ಹೊಸ ಅಡೆತಡೆಯಿಂದ ಹೇಗೆ ಪ್ರಭಾವಿತವಾಗಲಿದೆ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಸೂಚನೆ : ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು,ಕಥಾವಸ್ತು ಮತ್ತು ಸನ್ನಿವೇಶಗಳು ಕಾಲ್ಪನಿಕವಾಗಿದ್ದು  ,ಒಂದೊಮ್ಮೆ ಯಾರ ಜೀವನಕ್ಕೆ ,ಧಾ....

Address

PRATILIPI, Sona Towers, 4th Floor, No. 2, 26, 27 And 3, Hosur Road, Krishna Nagar, Industrial Area, Near Forum Mall
Bangalore
560029

Alerts

Be the first to know and let us send you an email when Pratilipi Kannada - ಪ್ರತಿಲಿಪಿ ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to Pratilipi Kannada - ಪ್ರತಿಲಿಪಿ ಕನ್ನಡ:

Shortcuts

Share