29/09/2017
ಮಾಹಿತಿ ಹಕ್ಕು ಕಾಯಿದೆ ತಿದ್ದುಪಡಿ
ಮಾಹಿತಿ ಹಕ್ಕು ಕಾಯಿದೆ 2005 ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರೀಕರ ಮೂಲಭೂತ ಹಕ್ಕಾಗಿದೆ. ಕೇಂದ್ರ ಸರ್ಕಾರ ಅಕ್ಟೊಬರ್ 12,2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯಿದೆಯ ಮೂಲ ಉದ್ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಮಾಹಿತಿ ಹಕ್ಕು ಕಾಯಿದೆ ದುರ್ಬಳಕೆ ಯಾಗುತ್ತಿದ್ದು ವ್ಯವಹಾರ ಕುದುರಿಸುವ ಒಂದು ಕಸುಬಾಗಿದೆ. ಸರ್ಕಾರದ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಆರ್.ಟಿ.ಐ ನ ಮೂಲ ಉದ್ದೇಶವಾಗಿದ್ದರೂ ಸಹ ಇದರ ಉಪಯೋಗವು ಕೇವಲ ssಸರ್ಕಾರಿ ಅಧಿಕಾರಿಗಳ ಬಲಹೀನತೆಯನ್ನು ತಿಳಿದು ಆ.ಟಿ.ಐ ಎಂಬ ಬ್ರಹ್ಮಾಸ್ತ್ರ ಬಳಸಿ ಅವರಿಂದ ಬೆದರಿಸಿ ಹಣ ಕೀಳುವ ದಂದೆಗೆ ಮುಳುಗಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಜೊತೆಗೆ ಅಧಿಕಾರಿಗಳು ಕಛೇರಿಯ ಕೆಲಸದ ಒತ್ತಡದ ಜೊತೆಗೆ ಮಾಹಿತಿ ಹಕ್ಕು ಕಾಯಿದೆ ನಿಯಮದಡಿಯಲ್ಲಿ ಅರ್ಜಿದಾರರು ಕೋರುವ ಮಾಹಿತಿಗಳನ್ನು ಒದಗಿಸಲು ಸಮಯ ಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಜಾರಿಗೆಗೊಳಿಸಿರುವ ಈ ಮಹನ್ನತ ಕಾಯ್ದೆಗೆ ಪೂರಕವಾದ ತಿದ್ದುಪಡಿಯ ಅವಶ್ಯಕತೆಯಿದೆ.
1) ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರುವ ಅರ್ಜಿದಾರರು ಅವರಿಗೆ ಸಂಬಂಧಿಸಿದ ವಿಷಯ/ಆಸ್ತಿಗೆ ಸಂಬಂಧಿಸಿರಬೇಕು.
2) ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿಗಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಬೇಕು
3) ಮಾಹಿತಿ ಹಕ್ಕು ನಿಯಮದಡಿ ಮಾಹಿತಿ ಪಡೆಯಲು ನಿಗದಿಗೊಳಿಸಿರುವ ಶುಲ್ಕವನ್ನು ವರದಿಗಳನ್ನಾಧರಿಸಿ ಶುಲ್ಕವನ್ನು ನಿಗದಿಗೊಳಿಸಬೇಕು
4) ಮಾಹಿತಿ ಹಕ್ಕು ನಿಯಮದಡಿ ಪಡೆದ ಅರ್ಜಿದಾರರು ವ್ಯಾವಹಾರಿಕವಾಗಿ ಬಳಸದಂತೆ ಶಿಕ್ಷೆ ನಿಗದಿಪಡಿಸಬೇಕು.
5) ಲೋಪವೆಸಗಿದ ಸರ್ಕಾರಿ ಅಧಿಕಾರಿಗಳಿಗೆ ಗರಿಷ್ಠ ಶಿಕ್ಷೆಯನ್ನು ಪ್ರಕಟಿಸಬೇಕು.
ಇಂತಿ ತಮ್ಮ ವಿಶ್ವಾಸಿ,
(ಉಮಾಪತಿ)
ಉಪಾಧ್ಯಕ್ಷರು,
ಸಿಂಧುವಳ್ಳಿ ಗ್ರಾಮಪಂಚಾಯಿತಿ.ಮೈಸೂರು ತಾಲ್ಲೂಕು